Health

ಕ್ಯಾಪ್ಟನ್‌ ವರುಣ್‌ ಸಿಂಗ್‌ ಆರೋಗ್ಯ ವಿಚಾರಿಸಿದ ಗೃಹ ಸಚಿವ

ಬೆಂಗಳೂರು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಮಾಂಡೊ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾಪ್ಟನ್‌  ವರುಣ್‌ ಸಿಂಗ್‌ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಆಸ್ಪತ್ರೆಯಲ್ಲಿ ವರುಣ್‌ ಸಿಂಗ್‌ ಅವರ ತಂದೆ-ತಾಯಿಯನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಬಳಿಕ ಮಾತನಾಡಿದ ಸಚಿವರು ವರುಣ್ ಸಿಂಗ್‌ ಅವರು ಬದುಕುಳಿದಿದ್ದೇ ಒಂದು ಅದೃಷ್ಟ ಯಾಕಂದ್ರೆ ಹೆಲಿಕಾಪ್ಟರ್‌ನಲ್ಲಿದ್ದ  ಸಿಡಿಎಸ್‌ ಬಿಪಿನ್‌ ರಾವತ್‌  ಒಳಗೊಂಡಂತೆ ೧೩ಮಂದಿ ಸಾವನ್ನಪ್ಪಿದ್ದಾರೆ. ದೇವರೊ ಇದಾನೆ ಅದಕ್ಕೆ ನಮ್ಮ ಪಾಲಿಗೆ ಇವರು ಬದುಕುಳಿದಿದ್ದಾರೆ. ಇನ್ನು ಸಂತೋಷದ ವಿಷಯ ಅಂದ್ರೆ ವರುಣ್‌ ಸಿಂಗ್‌ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿದ್ರೂ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬುದೇ  ದೊಡ್ಡ ಸಮಾಧಾನ. ಅವರ ಚಿಕಿತ್ಸೆಗಾಗಿ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.

Share Post