Health

ಕೊರೊನಾ ನಿರ್ಲಕ್ಷಿಸಿ ಶಬರಿಮಲೆಗೆ ತೆರಳ್ತಿದ್ದ 30 ಜನರ ಮೇಲೆ FIR

ಮಂಡ್ಯ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ ಸೋಂಕು ಹೆಚ್ಚುತ್ತಿದೆ. ಇದನ್ನು ನಿರ್ಲಕ್ಷಿಸಿದ ಕೆಲವು ಶಬರಿಮಲೆ ಯಾತ್ರಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊರೊನಾ ಪಾಸಿಟಿವ್‌ ಇದ್ದರೂ ಕೂಡ ಶಬರಿಮಲೆಗೆ ಹೊರಟ್ಟಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ ಆರ್ ಪೇಟೆ ತಾಲ್ಲೂಕಿನ ಮಂಚೀಬೀಡು ಗ್ರಾಮದ 30 ಮಂದಿ ಶಬರಿಮಲೆ ಯಾತ್ರೆಗೆ ತೆರಳಲು ಸಿದ್ಧವಾಗಿದ್ದರು. ಕೋವಿಡ್‌ ನೆಗೆಟೀವ್‌ ರಿಪೋರ್ಟ್‌ ಬರುವುದಕ್ಕೆ ಕಾಯದೇ ಆರೋಗ್ಯ ಇಲಾಖೆಯವರ ಕಣ್ತಪ್ಪಿಸಿ ಯಾತ್ರೆಗೆ ಹೊರಟ್ಟಿದ್ದಾರೆ.

ಆರೋಗ್ಯ ಇಲಾಖೆಯವರು ವರದಿ ಬರುವವರೆಗೂ ಕಾಯುವಂತೆ ಸೂಚಿಸಿದ್ದರೂ ಕೂಡ ಇಲಾಖೆ ಸಿಬ್ಬಂದಿಯ ಮಾತುಗಳನ್ನು ಲೆಕ್ಕಿಸದೇ ಯಾತ್ರೆಗೆ ಹೊರಟ್ಟಿದ್ದಾರೆ.

ಕೊರೊನಾ ರಿಪೋರ್ಟ್‌ ನೋಡಿದ ಆರೋಗ್ಯ ಇಲಾಖೆಗೆ ಶಾಕ್‌ ಕಾದಿತ್ತು, 30 ಜನರಲ್ಲಿ 15 ಜನರಿಗೆ ಸೋಂಕು ತಗುಲಿತ್ತು. ಆರೋಗ್ಯ ಇಲಾಖೆ ಕೂಡಲೇ ಅಲರ್ಟ್‌ ಆಗಿ ಪೊಲೀಸರ ಸಹಾಯದಿಂದ ಯಾತ್ರಾರ್ಥಿಗಳನ್ನು ಗುಂಡ್ಲುಪೇಟೆ ಬೇಗೂರು ಚೆಕ್ ಪೋಸ್ಟ್ ಬಳಿ ತಡೆದಿದ್ದಾರೆ.

ಈಗ 30ಜನರ ವಿರುದ್ಧ K R Pet ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share Post