BengaluruHealth

ನವಜಾತ ಶಿಶುವನ್ನು ಜೀವಂತ ಹೂತಿದ್ದರು!; ಮುಂದೇನಾಯ್ತು..?

ಆನೇಕಲ್; ಜೀವಂತ ನವಜಾತ ಶಿಶುವನ್ನು ದುರುಳರು ಹೂತಿದ್ದ ಘಟನೆ ಬಯಲಾಗಿದೆ.. ಆನೇಕಲ್‌ ಬಳಿಯ ಕತ್ರಿಗುಪ್ಪೆ ದಿಣ್ಣೆ ಬಳಿ ಈ ಘಟನೆ ನಡೆದಿದೆ.. ಸ್ಥಳೀಯರೊಬ್ಬರು ಬಹಿರ್ದೆಸೆಗೆ ತೆರಳಿದ್ದಾಗ ಮಗು ಕಿರುಚುತ್ತಿರುವ ಶಬ್ದ ಕೇಳಿದ್ದಾರೆ.. ಹೋಗಿ ನೋಡಿದಾಗ ಅರ್ಧ ಹೂತಿದ್ದ ಜೀವಂತ ಮಗು ಸಿಕ್ಕಿದೆ..
ಸ್ಥಳೀಯರು ಶಿಶುವನ್ನು ರಕ್ಷಣೆ ಮಾಡಿದ್ದಾರೆ.. ಅನಂತರ ಜಿಲ್ಲಾ ಮಕ್ಕಳ ರಕ್ಷಾಧಿಕಾರಿಗಳ ಕಚೇರಿಗೆ ಮಾಹಿತಿ ಕೊಟ್ಟಿದ್ದಾರೆ.. ಮಕ್ಕಳ ರಕ್ಷಣಾಧಿಕಾರಿ ಹೆಚ್‌.ಕೆ.ಆಶಾ ಮಗುವನ್ನು ದೊಮ್ಮಸಂದ್ರದ ಆಸ್ಪತ್ರೆಗೆ ತಂದಿದ್ದು, ಚಿಕಿತ್ಸೆ ಕೊಡಿಸುತ್ತಿದ್ದಾರೆ..
ಮಣ್ಣಿನಲ್ಲಿ ಹೂತಿದ್ದರಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ.. ಸದ್ಯ ಮಗು ಚೇತರಿಸಿಕೊಳ್ಳುತ್ತಿದೆ ಎಂದು ಗೊತ್ತಾಗಿದೆ.. ಸರ್ಜಾಪುರ ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಕೇಸ್‌ ದಾಖಲಾಗಿದೆ..

Share Post