HealthNational

ಗಂಟಲಲ್ಲಿ ಚಿಕನ್‌ ಪೀಸ್‌ ಸಿಕ್ಕಿಕೊಂಡು ವ್ಯಕ್ತಿ ಸಾವು!

ಶಾದ್‌ನಗರ; ಊಟ ಮಾಡುವಾಗ ಗಂಟಲಲ್ಲಿ ಚಿಕನ್‌ ಪೀಸ್‌ ಸಿಕ್ಕಿಹಾಕಿಕೊಂಡು ಉಸಿರಾಡಲಾಗದೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ.. ನೆರೆ ರಾಜ್ಯವಾದ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಶಾದ್‌ನಗರದಲ್ಲಿ ನಡೆದಿದೆ.. ಚಿಕನ್‌ ಬಿರಿಯಾನಿ ತಿನ್ನುವಾಗ ಚಿಕನ್‌ ಪೀಸ್‌ ಗಂಟಲಲ್ಲಿ ಸಿಕ್ಕಿಕೊಂಡಿದ್ದು, ಇದರಿಂದ ಉಸಿರುಗಟ್ಟಿ ವ್ಯಕ್ತಿ ಸಾವನ್ನಪ್ಪಿದ್ದಾನೆ.. 

ಅಣ್ಣಾರಾಮ್‌ ಗ್ರಾಮದ 39 ವರ್ಷದ ಶ್ರೀಕಾಂತ್‌ ಎಂಬಾತನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ.. ಈತ ಹೈದರಾಬಾದ್‌ನಲ್ಲಿರುವ ತನ್ನ ಸಹೋದರಿಯನ್ನು ಭೇಟಿಯಾಗಲು ಬಂದಿದ್ದ.. ಇದೇ ವೇಳೆ ಬಾರೊಂದಕ್ಕೆ ಹೋಗಿ ಕುಡಿದು, ಚಿಕನ್‌ ಬಿರಿಯಾನ್‌ ಆರ್ಡರ್‌ ಮಾಡಿದ್ದ.. ಬಿರಿಯಾನಿ ತಿನ್ನುವಾಗ ಚಿಕನ್‌ ಪೋಸ್‌ ಒಂದು ಗಂಟಲಲ್ಲಿ ಸಿಕ್ಕಿಕೊಂಡಿದೆ.. ಕೂಡಲೇ ಆತ ಹೊರಗೆ ಎದ್ದು ಬಂದಿದ್ದಾನೆ.. ಅದನ್ನು ಉಗುಳಲು ಎಷ್ಟು ಪ್ರಯತ್ನಿಸಿದರೂ ಆಗಿಲ್ಲ.. ಅಷ್ಟಲ್ಲಿ ಆತನ ಉಸಿರುಗಟ್ಟಿದ್ದು, ಬಾರ್‌ ಮುಂದೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ..

ಅತಿಯಾದ ಮದ್ಯ ಸೇವನೆಯಿಂದ ಸಾವನ್ನಪ್ಪಿರಬಹುದೆಂದು ಮೊದಲು ಶಂಕಿಸಲಾಗಿತ್ತು..  ಆದ್ರೆ ಗಂಟಲಲ್ಲಿ ಚಿಕನ್‌ ಸಿಕ್ಕಿ ಹಾಕಿಕೊಂಡಿದ್ದರಿಂದಲೇ ಸಾವನ್ನಪ್ಪಿರೋದು ಅಂತ ವೈದ್ಯರು ಪರೀಕ್ಷೆ ಮಾಡಿದ ನಂತರ ಗೊತ್ತಾಗಿದೆ.. ಮರಣೋತ್ತರ ಪರೀಕ್ಷೆಯಲ್ಲಿ ಗಂಟಲಲ್ಲಿ ಚಿಕನ್‌ ಪೀಸ್‌ ಇರುವುದು ಗೊತ್ತಾಗಿದೆ..

@TeluguScribe ಎಂಬ ಎಕ್ಸ್‌ ಖಾತೆಯಲ್ಲಿ ವ್ಯಕ್ತಿ ಕೆಳಗೆ ಬಿದ್ದಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ..

 

Share Post