CrimeDistricts

ಹಣ ಕೊಡ್ತೀನಿ ಬಾ ಎಂದು ಕರೆಸಿಕೊಂಡ; ಕತ್ತು ಸೀಳಿ ಕೊಲೆ ಮಾಡಿಬಿಟ್ಟ ಕುಚಿಕು ಗೆಳೆಯ!

ಬೀದರ್; ಆತ ಕುಚಿಕು ಗೆಳೆಯ.. ಇಬ್ಬರೂ ಒಬ್ಬರನ್ನು ಬಿಟ್ಟು ಒಬ್ಬರು ಇರುತ್ತಿರಲಿಲ್ಲ.. ಆದ್ರೆ ಇವರ ಸ್ನೇಹಕ್ಕೆ ಹಣ ಅಡ್ಡಿ ಬಂದಿತ್ತು.. ಒಬ್ಬ ಸ್ನೇಹಿತ ಅವಶ್ಯಕತೆಗೆ ಅಂತ ಮತ್ತೊಬ್ಬ ಸ್ನೇಹಿತನಿಂದ ಸಾಲವಾಗಿ ಹಣ ಪಡೆದಿದ್ದ.. ಇದೇ ಹಣದ ವಿಚಾರ ಈಗ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ.. ಕುಚಿಕು ಗೆಳೆಯನೇ ತನ್ನ ಸ್ನೇಹಿತನ ಕತ್ತು ಸೀಳು ಕೊಲೆ ಮಾಡಿದ್ದಾನೆ..  ಬೀದರ್‌ ಜಿಲ್ಲೆ ಯಾಕತ್‌ಪುರ್‌ ಗ್ರಾಮದಲ್ಲಿ ಈ ಕೃತ್ಯ ಎಸಗಲಾಗಿದೆ..

ಶಹಾಗಂಜ್ ನಿವಾಸಿ ಮೊಹಮ್ಮದ್ ಸಿರಾಜ್ ಎಂಬಾತನೇ ಕೊಲೆಯಾವ ವ್ಯಕ್ತಿಯಾಗಿದ್ದಾನೆ.. ಈತ ತನ್ನ ಬಾಲ್ಯ ಸ್ನೇಹಿತ ಯಾಸಿನ್‌ ಎಂಬಾತನಿಗೆ 12 ಲಕ್ಷ ರೂಪಾಯಿ ಸಾಲ ಕೊಟ್ಟಿದ್ದ.. ಯಾಸಿನ್‌ 11 ಲಕ್ಷ ರೂಪಾಯಿ ತೀರಿಸಿದ್ದ.. ಇನ್ನು 1 ಲಕ್ಷ ರೂಪಾಯಿ ಕೊಡೋದು ಬಾಕಿ ಇತ್ತು.. ಇದಕ್ಕಾಗಿ ಸಿರಾಜ್‌ ದಿನವೂ ಪೀಡಿಸುತ್ತಿದ್ದನಂತೆ.. ಬೇಗ ಹಣ ಕೊಡುತ್ತವಂತೆ ದಿನವೂ ಒತ್ತಡ ಹೇರುತ್ತಿದ್ದನಂತೆ.. ಇದರಿಂದ ಆಕ್ರೋಶಗೊಂಡಿದ್ದ ಯಾಸಿನ್‌, ಹಣ ನೀಡುತ್ತೇನೆ ಬಾ ಎಂದು ಮೊಹಮ್ಮದ್ ಸಿರಾಜ್ ನನ್ನು ಕರೆಸಿಕೊಂಡಿದ್ದಾನೆ..

ಹಣ ಕೊಡುತ್ತಾನೆ ಎಂದು ನಂಬಿಕೊಂಡು ಬಂದ ಸಿರಾಜ್‌ ಗೆ ಮೊದಲು ಯಾಸಿನ್‌ ಸುತ್ತಿಗೆಯಿಂದ ತಲೆಗೆ ಬಲವಾದ ಪೆಟ್ಟು ನೀಡಿದ್ದಾನೆ.. ನಂತರ ಚಾಕುವಿನಿಂದ ಕುತ್ತಿಗೆ ಕುಯ್ದು ಕೊಲೆ ಮಾಡಿದ್ದಾನೆ.. ಈ ಬಗ್ಗೆ ಮನ್ನಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

 

Share Post