DistrictsPolitics

ಬೆನ್ನಿಗೆ ಚೂರಿ ಹಾಕಿದ್ದೀರಿ, ಸ್ವಾಭಿಮಾನಿ ಎನ್ನಬೇಡಿ; ಸುಮಲತಾ ವಿರುದ್ಧ ಡಾ.ರವೀಂದ್ರ ಸಿಡಿಮಿಡಿ

ಮಂಡ್ಯ; ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ಘೋಷಿಸಿದ್ದಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರವೀಂದ್ರ ಸಿಡಿಮಿಡಿಗೊಂಡಿದ್ದಾರೆ. ನೀವು ನಮ್ಮ ನಂಬಿಕೆಯ ಕೊಲೆಗಡುಕರಾಗಿದ್ದೀರಿ. ಕತ್ತು ಹಿಸುಕಿದ್ದೀರಿ, ಹೀಗಾಗಿ ಇನ್ಮೇಲೆ ನೀವು ಸ್ವಾಭಿಮಾನಿ ಅನ್ನೋ ಪದವನ್ನು ಬಳಸಬಾರದು ಎಂದು ಡಾ.ರವೀಂದ್ರ ಹೇಳಿದ್ದಾರೆ.

ಮಂಡ್ಯ ಜಿಲ್ಲೆಯ ಅಸ್ಮಿತೆ, ಸ್ವಾಭಿಮಾನಕ್ಕಾಗಿ 249 ಕಿ.ಮೀ ಪಾದಯಾತ್ರೆ ಮಾಡಿದ್ದೆ, ಸುಮಲತಾ ಅವರನ್ನು ಬೆಂಬಲಿಸಿದ್ದೆ ಎಂದಿರುವ ರವೀಂದ್ರ, ಸುಮಲತಾ ಗೆಲುವಿನ ಹಿಂದೆ ನನ್ನಂತಹ ಹಲವರ ಹೋರಾಟವಿದೆ ಎಂದು ಹೇಳಿದ್ದಾರೆ. ಸುಮಲತಾರನ್ನು ನಾವೆಲ್ಲಾ ಸೇರಿ ಗೆಲ್ಲಿಸಿದೆವು. ಆದ್ರೆ ಅವರು ಗೆದ್ದ ನಂತರ ಜಿಲ್ಲೆಯ ಅಭಿವೃದ್ಧಿ ಕಡೆ ಗಮನವನ್ನೇ ಕೊಡಲಿಲ್ಲ. ಅವರು ಸ್ವಾಭಿಮಾನ ಎಂಬ ಪದವನ್ನು ಪದೇ ಪದೇ ಬಳಸುತ್ತಾರೆ. ಸ್ವಾಭಿಮಾನಕ್ಕೂ ಅವರಿಗೂ ಎಲ್ಲೆಂದೆಲ್ಲಿಯ ಸಂಬಂಧ ಎಂದು ರವೀಂದ್ರ ಪ್ರಶ್ನೆ ಮಾಡಿದ್ದಾರೆ. ಜಿಲ್ಲೆಯ ಸ್ವಾಭಿಮಾನವನ್ನು ನೀವು ಅಡವಿಡಬೇಡಿ ಎಂದೂ ರವೀಂದ್ರ ಅವರು ಸುಮಲತಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Share Post