CrimeDistricts

ಎಲ್ಲಾ ರೀತಿಯಲ್ಲೂ ಬಳಸಿಕೊಂಡ, ಜಾತಿ ಬೇರೆ ಅಂದ; ನೊಂದ ಯುವತಿ ಆತ್ಮಹತ್ಯೆ..!

ಬಳ್ಳಾರಿ; ಪ್ರೀತಿಸಿ, ಎಲ್ಲಾ ರೀತಿಯಲ್ಲೂ ಬಳಸಿಕೊಂಡ ಮೇಲೆ ಜಾತಿ ಬೇರೆ ಮದುವೆಯಾಗಲ್ಲ ಎಂದು ಪ್ರಿಯಕರ ಹೇಳಿದ್ದಕ್ಕೆ ಯುವತಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಬಳ್ಳಾರಿಯಲ್ಲಿ ಈ ಘಟನೆ ನಡೆದಿದ್ದು, ವಿಮ್ಸ್‌ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವತಿ ಸಾವನ್ನಪ್ಪಿದ್ದಾಳೆ.

ಅಮೃತಾ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಮೃತ ಪಿಯುಸಿ ಮುಗಿಸಿದ್ದಾಳೆ. ಇದೇ ವೇಳೆ ತನ್ನ ಸ್ನೇಹಿತೆಯ ಗಂಡನ ಸಹೋದರ ಸುನಿಲ್‌ ಎಂಬಾತ ಅಮೃತಾಗೆ ಪರಿಚಯವಾಗಿದ್ದಾನೆ. ಅದು ಪ್ರೀತಿಗೆ ತಿರುಗಿದ್ದು, ಆತ ಅಮೃತಾಳನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದಾನೆ. ಆದ್ರೆ ಮದುವೆ ವಿಚಾರ ಬಂದಾಗ ಇಬ್ಬರ ಜಾತಿ ಬೇರೆ ಬೇರೆ, ಹೀಗಾಗಿ ಮದುವೆಯಾಗೋದಕ್ಕೆ ಆಗಲ್ಲ ಎಂದುಬಿಟ್ಟಿದ್ದಾನೆ. ಇದರಿಂದ ಮನನೊಂದ ಅಮೃತಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದೇ ವೇಳೆ ಕುಟುಂಬದವರು ನೋಡಿಕೊಂಡು ಕೂಡಲೇ ಕುಣಿಕೆಯಿಂದ ಕೆಳಗಿಳಿಸಿ, ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅಮೃತಾ ಸಾವನ್ನಪ್ಪಿದ್ದಾಳೆ.

ಅಮೃತಾ ದಲಿತ ಸಮುದಾಯಕ್ಕೆ ಸೇರಿದವಳಾಗಿದ್ದು, ಆರೋಪಿ ಸುನಿಲ್‌ ಹಿಂದುಳಿದ ಜಾತಿಗೆ ಸೇರಿದವನಾಗಿದ್ದಾನೆ. ಈ ಕಾರಣಕ್ಕಾಗಿಯೇ ಆತ ಮದುವೆ ಬೇಡ ಎಂದಿದ್ದ ಎಂಬ ಆರೋಪ ಕೇಳಿಬಂದಿದೆ.

Share Post