DistrictsPolitics

ಸಕ್ಕರೆ ನಾಡು ಮಂಡ್ಯದಲ್ಲಿ ಯೋಗಿ ಆದಿತ್ಯ ನಾಥ್‌ ರೋಡ್‌ ಶೋ; ಕಿಕ್ಕಿರಿದಿದ್ದ ಜನಸ್ತೋಮ

ಮಂಡ್ಯ; ಮಂಡ್ಯ ಜೆಡಿಎಸ್‌ ಭದ್ರಕೋಟೆ. ಈ ಭದ್ರಕೋಟೆಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಇಂದು ಲಗ್ಗೆ ಇಟ್ಟಿದ್ದರು. ರೋಡ್‌ ಶೋ ನಡೆಸಿ ಜನರ ಗಮನ ಸೆಳೆದರು. ಯೋಗಿ ಆದಿತ್ಯನಾಥ್‌ ನೋಡಲು ರಸ್ತೆಯ ಇಕ್ಕೆಲೆಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಯೋಗಿ ಆದಿತ್ಯನಾಥ್‌ ಪರ ಜಯಘೋಷಗಳು ಮೊಳಗಿದವರು. ಯೋಗಿ ಜೊತೆ ಸಂಸದರಾದ ಸುಮಲತಾ ಅಂಬರೀಶ್‌, ಪ್ರತಾಪ ಸಿಂಗ್‌ ಮುಂತದವರು ಇದ್ದರು.

ಹತ್ತಾರು ಕಲಾತಂಡಗಳು, ಮಹಿಳೆಯರಿಂದ ಯೋಗಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಾವಿರಾರು ಅಭಿಮಾನಿಗಳು ಯೋಗಿ ಆದಿತ್ಯನಾಥ್‌ ಅವರ ಮೇಲೆ ಪುಷ್ಪ ಮಳೆ ಸುರಿಸಿದರು. ಮಂಡ್ಯದ ಸಂಜಯ್‌ ವೃತ್ತದಿಂದ ಯೋಗಿ ಆದಿತ್ಯನಾಥ್‌ ರೋಡ್‌ ಶೋ ಮೂಲಕ ಜನರತ್ತ ಕೈಬೀಸಿದರು. ಅನಂತರ ನಡೆದ ಸಮಾರಂಭದಲ್ಲಿ ಭಾಗಿಯಾಗಿ ಬಿಜೆಪಿ ಪರ ಮತಯಾಚನೆ ಮಾಡಿದರು.

 

Share Post