DistrictsPolitics

ಕನಕಪುರದ ಬಂಡೆ ಪರ ಪತ್ನಿ ಉಷಾ ಭರ್ಜರಿ ಕ್ಯಾಂಪೇನ್‌

ರಾಮನಗರ; ಡಿ.ಕೆ.ಶಿವಕುಮಾರ್‌ ಅವರು ಈಗ ಕೆಪಿಸಿಸಿ ಅಧ್ಯಕ್ಷರು. ರಾಜ್ಯಾದ್ಯಂತ ಪ್ರಚಾರ ಮಾಡಬೇಕು. ಹೀಗಾಗಿ ಅವರು ಕನಕಪುರದ ಕಡೆ ಹೆಚ್ಚು ಗಮನ ಕೊಡೋದಕ್ಕೆ ಆಗೋದಿಲ್ಲ. ಈ ಕಾರಣಕ್ಕಾಗಿ ಪತಿಯ ಪರವಾಗಿ ಉಷಾ ಅವರು ಪ್ರಚಾರ ಶುರು ಮಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಪತ್ನಿ ಉಷಾ ಅವರು ಇಂದು ಕನಕಪುರ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸಂಚರಿಸಿ ಮತಬೇಟೆ ನಡೆಸಿದರು. ಮನೆ ಮನೆಗೂ ಹೋಗಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಮನವಿ ಮಾಡಿದರು.

ಡಿ.ಕೆ.ಶಿವಕುಮಾರ್‌ ಅವರು ಈ ಮುಖ್ಯಮಂತ್ರಿಯಾಗುವ ಅವಕಾಶವಿದೆ. ಹೀಗಾಗಿ ಅವರನ್ನು ನೀವು ಗೆಲ್ಲಿಸಿ ಅವರಿಗೆ ಶಕ್ತಿ ತುಂಬಬೇಕು ಎಂದು ಉಚಾ ಅವರು ಮತದಾರರಲ್ಲಿ ಮನವಿ ಮಾಡಿದರು. ಇದೇ ವೇಳೆ ಮಾತನಾಡಿರುವ ಉಷಾ ಅವರು, ನಾನು ಪ್ರತಿ ಚುನಾವಣೆಯಲ್ಲೂ ನನ್ನ ಪತಿ ಪರ ಪ್ರಚಾರ ಮಾಡುತ್ತೇನೆ. ಆದ್ರೆ ಈ ಬಾರಿ ಅವರು ಜಾಸ್ತಿ ಇಲ್ಲಿ ಪ್ರಚಾರ ಮಾಡಲು ಆಗಲ್ಲ. ಹೀಗಾಗಿ ಕೊನೆಯ ದಿನದವರೆಗು ನಾನು ಪ್ರಚಾರ ನಡೆಸಲಿದ್ದೇನೆ ಎಂದು ಉಷಾ ಹೇಳಿದರು. ನಾನು ಪತ ಕೇಳುವುದೇ ಬೇಕಿಲ್ಲ. ಜನರೇ ಮತ ಹಾಕಲಿದ್ದಾರೆ. ಕನಕಪುರದ ಜನ ನನ್ನ ಪತಿಗೆ ಆಶೀರ್ವದಿಸುತ್ತಾರೆ ಎಂಬ ವಿಶ್ವಾಸವನ್ನು ಉಷಾ ವ್ಯಕ್ತಪಡಿಸಿದರು.

Share Post