CrimeDistricts

2 ದಿನದಲ್ಲಿ ಮದುವೆಯಾಗಬೇಕಿದ್ದ ಯುವತಿ ಸಾವನ್ನಪ್ಪಿದ್ದೇಗೆ..?; ಆತ್ಮಹತ್ಯೆಯೋ ಕೊಲೆಯೋ..?

ವಿಜಯನಗರ; ಆಕೆ ಏಳೆಂಟು ವರ್ಷಗಳಿಂದ ಆತನನ್ನು ಪ್ರೀತಿಸಿದ್ದಳು. ಮಗಳು ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದೇನೆ ಎಂದಾಗ ಒಲ್ಲದ ಮನಸ್ಸನಿಂದಲೇ ಅಪ್ಪ ಒಪ್ಪಿಗೆ ಕೊಟ್ಟಿದ್ದರು. ಮದುವೆ ಡೇಟ್‌ ಕೂಡಾ ಫಿಕ್ಸ್‌ ಆಗಿತ್ತು. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಇನ್ನು ಎರಡು ದಿನದಲ್ಲಿ ಮದುವೆಯೂ ಆಗಬೇಕಿತ್ತು. ಆದ್ರೆ, ಆ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ವಿಜಯನಗರ  ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂ ಬಳಿ ಈ ದುರ್ಘಟನೆ ನಡೆದಿದೆ.

ಐಶ್ವರ್ಯಾ ಎಂಬಾಕೆಯೇ ಸಾವನ್ನಪ್ಪಿದ ಯುವತಿ. ಐಶ್ವರ್ಯಾ ಹಾಗೂ ಅಶೋಕ್‌  ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದ್ರೆ, ಐಶ್ವರ್ಯಾ ಅವರದ್ದು ಕೆಳಜಾತಿ ಅನ್ನೋ ಕಾರಣಕ್ಕೆ ಅಶೋಕ್‌ ಮನೆಯವರು ಮದುವೆಗೆ ಹಲವು ಷರತ್ತುಗಳನ್ನು ಹಾಕಿದ್ದರು. ಹೀಗಾಗಿ ಐಶ್ವರ್ಯಾ ಅವರ ಅಪ್ಪ ನಮಗೂ ಅವರಿಗೂ ಹೊಂದಾಣಿಕೆ ಆಗಲ್ಲ. ಮದುವೆ ಬೇಡ ಬಿಡು ಮಗಳೆ ಎಂದಿದ್ದರಂತೆ. ಆದರೂ ಐಶ್ವರ್ಯಾ ಪಟ್ಟು ಹಿಡಿದಿದ್ದಕ್ಕೆ ತಂದೆ ಮದುವೆಗೆ ಒಪ್ಪಿದ್ದಾರೆ. ಈಗ ನೋಡಿದರೆ ಐಶ್ವರ್ಯಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.

ಯುವಕನ ಮನೆಯವರೇ ನಮ್ಮ ಮಗಳ ಕೊಲೆ ಮಾಡಿದ್ದಾರೆ ಅಂತ ಐಶ್ವರ್ಯಾ ತಂದೆ ಆರೋಪ ಮಾಡುತ್ತಿದ್ದಾರೆ.

 

Share Post