DistrictsPolitics

ನಾಳೆ ಬಸವಕಲ್ಯಾಣದಲ್ಲಿ ವಿಜಯ ಸಂಕಲ್ಪ ಯಾತ್ರೆ; ಅಮಿತ್‌ ಶಾಗೆ ಬೆಳ್ಳಿ ಗದೆ ಹಾಗೂ ಕಿರೀಟ ರೆಡಿ

ಬೀದರ್; ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಬೇರೆ ಬೇರೆ ಹೆಸರಿನಲ್ಲಿ ಯಾತ್ರೆಗಳನ್ನು ಮಾಡುತ್ತಿವೆ. ಕಾಂಗ್ರೆಸ್‌ ಪ್ರಜಾಧ್ವಿ ಯಾತ್ರೆ ನಡೆಸುತ್ತಿದ್ದರೆ, ಜೆಡಿಎಸ್‌ ಪಂಚರತ್ನ ಯಾತ್ರೆ ಮಾಡುತ್ತಿದೆ. ಇದೀಗ ಬಿಜೆಪಿ ರಾಜ್ಯದ ಮೂರು ಮೂಲೆಗಳಿಂದ ವಿಜಯ ಸಂಕಲ್ಪ ಯಾತ್ರೆ ಶುರು ಮಾಡಿದೆ. ನಿನ್ನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಈ ಯಾತ್ರೆಗೆ ಚಾಲನೆ ನೀಡಿದ್ದರು. ಇದೀಗ ನಾಳೆ ಬೀದರ್‌ನ ಬಸವಕಲ್ಯಾಣದಲ್ಲಿ ಮತ್ತೊಂದು ರಥಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಚಾಲನೆ ನೀಡಲಿದ್ದಾರೆ. ಅದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.

ನಾಳೆ ಬೀದರ್‌ ನ ಬಸವಕಲ್ಯಾಣಕ್ಕೆ ಅಮಿತ್‌ ಶಾ ಬರುತ್ತಿದ್ದು, ಅವರಿಗಾಗಿ ವಿಶೇಷ ಉಡುಗೊರೆ ಸಿದ್ಧವಾಗಿದೆ. ಬಿಜೆಪಿ ಚಾಣಕ್ಯನಿಗೆ ನೀಡಲು ಬೆಳ್ಳಿಯ ಗದೆ ಹಾಗೂ ಬೆಳ್ಳಿಯ ಕಿರೀಟವನ್ನು ಸಿದ್ಧಪಡಿಸಲಾಗಿದೆ. ಬಸವ ಕಲ್ಯಾಣ ಶಾಸಕ ಶರಣು ಸಲಗರ್‌ ಇದನ್ನು ಮಾಡಿಸಿದ್ದಾರೆ. ಇದು ಐದು ಕೆಜಿ ತೂಕದ ಬೆಳ್ಳಿಯಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

Share Post