Districts

ವಂಟಮೂರಿ ಪ್ರಕರಣ; ಪ್ರೇಮಿಗಳಿಗೆ ಮದುವೆ ಮಾಡಿಸಿದ ಪೊಲೀಸರು

ಬೆಳಗಾವಿ; ಅನ್ಯಜಾತಿಯ ಯುವತಿ ಜೊತೆ ಮಗ ಓಡಿಹೋಗಿದ್ದ. ಈ ಕಾರಣಕ್ಕಾಗಿ ಯುವಕನ ತಾಯಿ ಹಾಗೂ ಮನೆ ಮೇಲೆ ಯುವತಿಯ ಕಡೆಯವರು ದಾಳಿ ನಡೆಸಿದ್ದ ಘಟನೆ ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ನಡೆದಿತ್ತು. ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದ ಕಾರಣಕ್ಕಾಗಿ ಈ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಪೊಲೀಸರು ಓಡಿಹೋಗಿದ್ದ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ. ಬೆಳಗಾವಿ ದಕ್ಷಿಣ ಉಪನೋಂದಣಿ ಕಚೇರಿಯಲ್ಲಿ ರಿಜಿಸ್ಟರ್‌ ಕೂಡಾ ಮಾಡಿಸಲಾಗಿದೆ.

ದುಂಡಪ್ಪ ಅಶೋಕ ನಾಯಕ್ ಹಾಗೂ ಪ್ರಿಯಾಂಕಾ ಬಸಪ್ಪ ನಾಯಕ್‌ ಎಂಬುವವರು ಪರಿಸ್ಪರ ಪ್ರೀತಿಸುತ್ತಿದ್ದರು. ಆದ್ರೆ ಯುವತಿಯ ಪೋಷಕರು ಇದನ್ನು ತಿರಸ್ಕರಿಸಿ ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯ ಮಾಡಿದ್ದರು. ಆದ್ರೆ ಯುವತಿ ಪ್ರಿಯಾಂಕಾ, ತನ್ನ ಪ್ರಿಯಕರ ಅಶೋಕ್‌ ಜೊತೆ ಓಡಿಹೋಗಿದ್ದಳು. ಈ ವಿಚಾರ ಗೊತ್ತಾಗುತ್ತಿದ್ದ ಯುವತಿಯ ಪೋಷಕರು, ಯುವಕನ ಮನೆಗೆ ನುಗ್ಗಿ, ಮನೆ ಧ್ವಂಸ ಮಾಡಿದ್ದರು. ಅನಂತರ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದರು.

 

Share Post