DistrictsPolitics

ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು; ಸಿ.ಟಿ.ರವಿ

ಧಾರವಾಡ; ಉರಿಗೌಡ, ನಂಜೇಗೌಡ ಐತಿಹಾಸಿಕ ವ್ಯಕ್ತಿಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಮಾತನಾಡಿರುವ ಅವರು, ಟಿಪ್ಪು ಸುಲ್ತಾನ್‌ರನ್ನು ಕೊಂದಿದ್ದು ಇವರಿಬ್ಬರೇ ಎಂದು ಪುನರುಚ್ಚರಿಸಿದ್ದಾರೆ.

ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಟಾಂಗ್‌ ನೀಡಿರುವ ಸಿ.ಟಿ.ರವಿ, ಉರಿಗೌಡ ಹಾಗೂ ನಂಜೇಗೌಡರು ಟಿಪ್ಪು ಸುಲ್ತಾನ್‌ರನ್ನು ಕೊಂದರು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿಯವರು ಮಂಡ್ಯಕ್ಕೆ ಬರುವಾಗ, ಉರಿಗೌಡ ಹಾಗೂ ನಂಗೇಗೌಡ ಹೆಸರಲ್ಲಿ ದ್ವಾರ ನಿರ್ಮಿಸಲಾಗಿತ್ತು. ಆದ್ರೆ, ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಅದನ್ನು ತೆಗೆಯಲಾಗಿತ್ತು. ಅನಂತರವೂ ಉರಿಗೌಡ, ನಂಜೇಗೌಡರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಬಿಜೆಪಿಯವರು ಇವರಿಬ್ಬರೂ ಐತಿಹಾಸಿಕ ವ್ಯಕ್ತಿಗಳು ಎಂದರೆ, ವಿಪಕ್ಷಗಳು ಈ ಹೆಸರಿನ ವ್ಯಕ್ತಿಗಳೇ ಇತಿಹಾಸದಲ್ಲಿ ಉಲ್ಲೇಖವಾಗಿಲ್ಲ. ಇಬ್ಬರೂ ಬಿಜೆಪಿಯ ಕಾಲ್ಪನಿಕ ವ್ಯಕ್ತಿಗಳು ಎಂದು ಹೇಳುತ್ತಿವೆ.

Share Post