Districts

ಉಲ್ಲಾಳ ಬೀಚ್‌ನಲ್ಲಿ ಮೈಸೂರಿನ ಇಬ್ಬರು ನೀರುಪಾಲು

ಮೈಸೂರು;  ಮೈಸೂರಿನ ಇಬ್ಬರು ವ್ಯಕ್ತಿಗಳು ಮಂಗಳೂರಿನ ಉಲ್ಲಾಳ ಬೀಚ್ ನಲ್ಲಿ ನೀರು ಪಾಲಾಗಿರುವ ಘಟನೆ ನಡೆದಿದೆ. ಕೃಷಿ ಮೇಳದಲ್ಲಿ ಸ್ಟಾಲ್‌ ಇಡಲು ಹೋಗಿದ್ದ ಇಬ್ಬರು, ಬೆಳಗಿನ ವೇಳೆಯಲ್ಲಿ ಬೀಚ್‌ನಲ್ಲಿ ಮೋಜು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಮೈಸೂರಿನ ರಾಜೀವ್ ನಗರದ ದಿವಾಕರ ಆರಾಧ್ಯ (40) ಹಾಗೂ ನಿಂಗಣ್ಣ ಮೃತಪಟ್ಟವರು. ದಿವಾಕರ ಆರಾಧ್ಯ ಮೈಸೂರಿನ ಅಗ್ರಹಾರದ ಆರಾಧ್ಯ ನ್ಯಾಚುಲರ್ಸ್ ನ ಮಾಲೀಕರಾಗಿದ್ದಾರೆ. ಇವರು ಉಲ್ಲಾಳ ಬೀಚ್‌ನಲ್ಲಿ ಈಜಾಡುತ್ತಿದ್ದಾಗ ದೊಡ್ಡ ಅಲೆಯಲ್ಲಿ ತೇಲಿಹೋಗಿದ್ದಾರೆ. ತರುವಾಯ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿಗಳು ಇಬ್ಬರ ಶವ ಹುಡುಕಿ ದಡಕ್ಕೆ ತಂದ್ದಾರೆ. ಅಲ್ಲೆ ಪೋಸ್ಟ್ ಮಾರ್ಟಂ ಆಗಲಿದ್ದು, ಇಬ್ಬರ ಮೃತದೇಹಗಳು ರಾತ್ರಿ ವೇಳೆಗೆ ಮೈಸೂರಿಗೆ ಬರಲಿವೆ ಎಂದು ತಿಳಿದುಬಂದಿದೆ.

Share Post