CrimeDistricts

ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು!

ಮಂಡ್ಯ; ಈಜಲು ಬಾರದಿದ್ದರೂ ಈಜಲೆಂದು ನೀರಿಗಿಳಿದಿದ್ದ ಇಬ್ಬರು ಬಾಲಕರು ಕೆರೆ ಪಾಲಾಗಿದ್ದಾರೆ.. ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. 14 ವರ್ಷದ ಸೋಮು ಹಾಗೂ 17 ವರ್ಷದ ಮುತ್ತುರಾಜ್‌ ಸಾವನ್ನಪ್ಪಿದವರಾಗಿದ್ದಾರೆ..
ಮಳೆಯಿಂದಾಗಿ ಕೆರೆಯಲ್ಲಿ ನೀರು ತುಂಬಿದ್ದು, ಐವರು ಸ್ನೇಹಿತರು ನಿನ್ನೆ ಕರೆಯಲ್ಲಿ ಈಜಾಡಲು ಹೋಗಿದ್ದರು.. ಇದರಲ್ಲಿ ಸೋಮು ಹಾಗೂ ಮುತ್ತುರಾಜ್‌ಗೆ ಈಜಲು ಬರುತ್ತಿರಲಿಲ್ಲ.. ಕಲಿಯುತ್ತಿದ್ದರು.. ಹೀಗಾಗಿ ಆಳದ ಪ್ರದೇಶಕ್ಕೆ ಹೋಗಿದ್ದರಿಂದ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.. ಸದ್ಯ ಮುತ್ತುರಾಜು ಮೃತದೇಹವನ್ನು ಹೊರತೆಗೆಯಲಾಗಿದೆ.. ಸೋಮು ದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ..
ಭಾನುವಾರ ಸಂಜೆ ಐವರು ಸ್ಮೇಹಿತರು ಮಾತಾಡಿಕೊಂಡು ಈಜಾಡಲು ಹೋಗಿದ್ದರು.. ಇದರಲ್ಲಿ ಮೂವರಿಗೆ ಈಜು ಬರುತ್ತಿತ್ತು.. ಉಳಿದಿಬ್ಬರು ಕಡಿಮೆ ನೀರಿರುವ ಕಡೆ ಆಟವಾಡುತ್ತಿದ್ದರು.. ಇದೇ ವೇಳೆ ಆಳ ಇರುವ ಕಡೆ ಗೊತ್ತಿಲ್ಲದೆ ಹೋದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.. ಇಬ್ಬರು ಸ್ನೇಹಿತರು ನೀರಿನಲ್ಲಿ ಮುಳುಗುತ್ತಿದ್ದನ್ನು ನೋಡಿದ ಇತರ ಮೂವರು ಸ್ನೇಹಿತರು ರಕ್ಷಣೆಗೆ ಮುಂದಾಗಿದ್ದಾರೆ.. ಆದ್ರೆ ಸಾಧ್ಯವಾಗಿಲ್ಲ.. ಕಿರುಚಾಡಿ ಸಹಾಯಕ್ಕಾಗಿ ಹತ್ತಿರದಲ್ಲಿರುವವರನ್ನು ಕರೆದಿದ್ದಾರೆ.. ಅವರು ಬರುವ ವೇಳೆ ಅನಾಹುತ ನಡೆದುಹೋಗಿದೆ..
ಬೆಸಗರಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..

Share Post