CrimeDistricts

ವ್ಯಕ್ತಿಯ ರುಂಡ ಕತ್ತರಿಸಿ, ಮುಂಡ ಬಿಟ್ಟುಹೋದ ದುಷ್ಕರ್ಮಿಗಳು!

ಗದಗ; ಗದಗ ಜಿಲ್ಲೆಯಲ್ಲಿ ಜಮೀನು ಕಾಯುತ್ತಿದ್ದ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ವ್ಯಕ್ತಿಯ ರುಂಡವನ್ನು ಕತ್ತರಿಸಿ ಅದನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದಾರೆ. ಆದ್ರೆ ಮುಂಡವನ್ನು ಅಲ್ಲಿಯೇ ಬಿಟ್ಟಿದ್ದಾರೆ. ಬೆಚ್ಚಿಬೀಳಿಸುವ ಘಟನೆ ಇದಾಗಿದ್ದು, ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ಗದಗ ಬಳಿಯ ತಿಮ್ಮಾಪುರ ಎಂಬಲ್ಲಿ ಈ ಕೃತ್ಯ ಎಸಗಲಾಗಿದೆ. ಕೊಪ್ಪಳ ಜಿಲ್ಲೆಯ ಮಾಳೆಕೊಪ್ಪ ಗ್ರಾಮದ ನಿವಾಸಿ ಸಣ್ಣಹನಂತಪ್ಪ ವಜ್ರದ್(60) ಕೊಲೆಯಾದ ವ್ಯಕ್ತಿಯಾಗಿದ್ದಾರೆ. ಜಮೀನಿನಲ್ಲಿ ಮೆಣಸಿನಕಾಯಿ ಹಾಕಲಾಗಿದೆ. ಅದನ್ನು ಕಾಯಲು ಅವರು ಅಲ್ಲಿದ್ದರು. ಜಮೀನಿನ ಗುಡಿಸಲಿನಲ್ಲಿ ಮಲಗಿದ್ದಾಗ ದುಷ್ಕರ್ಮಿಗಳ ಅವರ ರುಂಡ ಕತ್ತರಿಸಿದ್ದಾರೆ.

ಗದಗ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

Share Post