DistrictsPolitics

ಸ್ವರೂಪ್‌ ನನ್ನ ಮಗನಿದ್ದಂತೆ; ಮುನಿಸಿ ಬಿಟ್ಟ ಮಾತಾಡಿದ ಭವಾನಿ ರೇವಣ್ಣ

ಹಾಸನ; ಸ್ವರೂಪ್‌ ಬೇರೆ ಅಲ್ಲ, ನನ್ನ ಮಕ್ಕಳು ಬೇರೆ ಅಲ್ಲ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಮುನಿಸು ಬಿಟ್ಟು ಮಾತನಾಡಿದ್ದಾರೆ. ಇಂದು ಹಾಸನ ಕ್ಷೇತ್ರದಿಂದ ಸ್ವರೂಪ್‌ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರೇವಣ್ಣ ಕುಟುಂಬ ಹಾಜರಿತ್ತು. ಈ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಭವಾನಿ ರೇವಣ್ಣ, ಬಿಜೆಪಿಯನ್ನು ಸೋಲಿಸಬೇಕು, ಸ್ವರೂಪ್‌ ಗೆಲ್ಲಬೇಕು ಎಂದರು.

ಸ್ವರೂಪ್‌ ಅವರನ್ನು ಪಕ್ಕದಲ್ಲೇ ನಿಲ್ಲಿಸಿಕೊಂಡು ಮಾತನಾಡಿದ ಭವಾನಿ ರೇವಣ್ಣ, ಸ್ವರೂಪ್‌ ಅವರ ಕೈ ಎತ್ತಿ ಗೆಲ್ಲಿಸಿಕೊಡುವಂತೆ ಮನವಿ ಮಾಡಿದರು. ಇದೇ ವೇಳೆ ಸ್ವರೂಪ್‌ ಬೇರೆ ಅಲ್ಲ, ನನ್ನ ಮಕ್ಕಳು ಬೇರೆ ಅಲ್ಲ ಎಂದು ಹೇಳುವ ಮೂಲಕ ಯಾವುದೇ ಮುನಿಸಿಲ್ಲ ಎಂಬ ಸಂದೇಶವನ್ನು ಜನತೆಗೆ ರವಾನಿಸಿದರು.

ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಪಟ್ಟು ಹಿಡಿದಿದ್ದರು. ಆದ್ರೆ ಕುಮಾರಸ್ವಾಮಿಯವರು ಸ್ವರೂಪ್‌ ಅವರಿಗೆ ಟಿಕೆಟ್‌ ನೀಡಿದರು. ಇದರಿಂದಾಗಿ ಭವಾನಿ ಮುನಿಸಿಕೊಂಡಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ ಅವರೇ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದು ಕುತೂಹಲಕ್ಕೆ ಕಾರಣರಾದರು.

Share Post