DistrictsPolitics

ಜೆಡಿಎಸ್‌ ಸೇರಿದ ಆಯನೂರು ಮಂಜುನಾಥ್‌; ಶಿವಮೊಗ್ಗದಿಂದ ಸ್ಪರ್ಧೆ

ಚಿತ್ರದುರ್ಗ; ಬಿಜೆಪಿಯ ಮತ್ತೊಂದು ವಿಕೆಟ್‌ ಪತನವಾಗಿದೆ. ಶಿವಮೊಗ್ಗ ಟಿಕೆಟ್‌ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ಆಯನೂರು ಮಂಜುನಾಥ್‌ ಅಧಿಕೃತವಾಗಿ ಜೆಡಿಎಸ್‌ ಸೇರ್ಪಡೆಯಾಗಿದ್ದಾರೆ. ಚಿತ್ರದುರ್ಗದ ಜೆಡಿಎಸ್‌ ಕಚೇರಿಯಲ್ಲಿ ಅವರು ಜೆಡಿಎಸ್‌ಗೆ ಸೇರ್ಪಡೆಯಾದರು. ಮಾಜಿ ಸಿಎಂ ಕುಮಾರಸ್ವಾಮಿಯವರು ಆಯನೂರು ಮಂಜುನಾಥ್‌ರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಬೆಳಗ್ಗೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಆಯನೂರು ಮಂಜುನಾಥ್‌, ಬಿಜೆಪಿ ಪಕ್ಷಕ್ಕೆ ಹಾಗೂ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಪ್ರಕಟಿಸಿದ್ದರು. ಎರಡೂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರು, ಚಿತ್ರದುರ್ಗದಲ್ಲಿದ್ದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ, ಪಕ್ಷಕ್ಕೆ ಸೇರ್ಪಡೆಯಾದರು. ಇದೇ ವೇಳೆ ಕುಮಾರಸ್ವಾಮಿಯವರು ಶಿವಮೊಗ್ಗದಿಂದ ಸ್ಪರ್ಧೇ ಮಾಡಲು ಜೆಡಿಎಸ್‌ ಬಿಫಾರ್ಮ್‌ ಅನ್ನು ಆಯನೂರು ಮಂಜುನಾಥ್‌ಗೆ ನೀಡಿದರು.

ನಾಳೆ ಆಯನೂರು ಮಂಜುನಾಥ್‌ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ.

Share Post