CrimeDistricts

ವಸತಿ ಶಾಲೆ ಕಾಂಪೌಂಡ್‌ ಹಾರಲು ಹೋಗಿ ವಿದ್ಯಾರ್ಥಿನಿ ಸಾವು!

ದಾವಣಗೆರೆ; ರಾತ್ರಿ ವೇಳೆ ವಸತಿ ಶಾಲೆ ಕಾಂಪೌಂಡ್‌ ಹಾರಲು ಹೋಗಿ ಜಾರಿ ಬಿದ್ದು ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆ ಹರಿಹರ ಪಟ್ಟಣದಲ್ಲಿ ನಡೆದಿದೆ. ಮಾನ್ಯತಾ ಪಬ್ಲಿಕ್‌ ವಸತಿ ಕಾಲೇಜಿನ ವಿದ್ಯಾರ್ಥಿನಿ ಸಿನಿಕ್ಷಾ ಸಾವನ್ನಪ್ಪಿರುವ ಬಾಲಕಿ.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಶಶಿಕಾಂತ್ ಪುತ್ರಿ ಸಿನಿಕ್ಷಾ ಮೊನ್ನೆಯಷ್ಟೇ ವಸತಿ ಶಾಲೆಗೆ ಸೇರಿದ್ದಳು. ನಾಲ್ಕು ದಿನದ ಹಿಂದೆ ತಂದೆಯೇ ಬಂದು ವಸತಿ ಶಾಲೆಗೆ ಸೇರಿಸಿ ಹೋಗಿದ್ದರು. ಆದ್ರೆ ಅದ್ಯಾಕೋ ಏನೋ ಮಂಗಳವಾರ ರಾತ್ರಿ 11:30ರ ಸುಮಾರಿಗೆ ಸಿನಿಕ್ಷಾ, ವಸತಿ ಶಾಲೆಯ ಕಾಂಪೌಂಡ್ ಹತ್ತೋದಕ್ಕೆ ಹೋಗಿದ್ದಾಳೆ. ಈ ವೇಳೆ ಜಾರಿಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಕೂಡಲೇ ಆಕೆಯನ್ನು ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ರಕ್ತ ಜಾಸ್ತಿ ಸೋರಿಕೆಯಾಗಿದ್ದರಿಂದ ಸಾವನ್ನಪ್ಪಿದ್ದಾಳೆ.

ತಡರಾತ್ರಿಯಲ್ಲಿ ಆಕೆ ಯಾಕೆ ವಸತಿ ಶಾಲೆ ಕಾಂಪೌಂಡ್‌ ಹತ್ತಲು ಹೋಗಿದ್ದಳು ಎಂಬುದು ಇನ್ನೂ ನಿಗೂಢವಾಗಿದೆ. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Post