BengaluruNationalPolitics

ಚುನಾವಣೆಯಲ್ಲಿ ಹಿರಿಯ ನಾಯಕರು ಹೊಂದಾಣಿಕೆ ಮಾಡಿರುವುದು ನಿಜ; ಸಿ.ಪಿ.ಯೋಗೇಶ್ವರ್‌

ನವದೆಹಲಿ; ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿರುವುದು ನಿಜ ಎಂದು ಬಿಜೆಪಿ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಅವರು, ಸಂಸದ ಪ್ರತಾಪ ಸಿಂಹ ಹೇಳಿಕೆಯನ್ನು ಪುಷ್ಠೀಕರಿಸಿದ್ದಾರೆ.

ನನಗೂ ವೈಯಕ್ತಿಕವಾಗಿ ಹಾಗೆಯೇ ಅನಿಸಿದೆ. ಹಿರಿಯ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿ ಸೋತಿದೆ ಎನಿಸುತ್ತಿದೆ ಎಂದು ಸಿ.ಪಿ.ಯೋಗೇಶ್ವರ್‌ ಹೇಳಿದ್ದಾರೆ. ಜೊತೆಗೆ ಬೊಮ್ಮಾಯಿ ಸಂಪುಟದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಮಾಡದೇ ಇದ್ದದ್ದು ಕೂಡಾ ಬಿಜೆಪಿ ಸೋಲಿಗೆ ಕಾರಣ ಎಂದೂ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಸುಳ್ಳು ಆರೋಪಗಳನ್ನು ಮಾಡಿತು. ಅದಕ್ಕೆ ತಕ್ಕಂತೆ ಠಕ್ಕರ್‌ ಕೊಡೋದಕ್ಕೆ ನಮ್ಮ ನಾಯಕರಿಗೆ ಆಗಲಿಲ್ಲ. ಹೀಗಾಗಿ, ಕಾಂಗ್ರೆಸ್‌ ಗೆಲುವು ಸುಲಭವಾಯಿತು ಎಂದು ಯೋಗೇಶ್ವರ್‌ ಹೇಳಿದರು.

Share Post