DistrictsPolitics

ಸ್ನೇಹಮಯಿ ಕೃಷ್ಣ ರೌಡಿ ಶೀಟರ್‌; ಕಾಂಗ್ರೆಸ್‌ ವಕ್ತಾರ ಲಕ್ಷ್ಮಣ್‌

ಮೈಸೂರು; ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿ ಶೀಟರ್‌ ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಆರೋಪ ಮಾಡಿದ್ದಾರೆ.. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2019ರಿಂದ ಸ್ನೇಹಮಯಿ ಕೃಷ್ಣ ರೌಡಿ ಶೀಟರ್‌ ಆಗಿದ್ದು, ಅವರ ವಿರುದ್ಧ ಕೊಲೆ ಕೇಸ್‌ ಸೇರಿ 44 ಪ್ರಕರಣಗಳಿವೆ. ಬ್ಲ್ಯಾಕ್‌ಮೇಲ್‌, ಭೂ ಅವ್ಯವಹಾರ ಸೇರಿದಂತೆ ಕೇಸ್‌ಗಳಿವೆ ಎಂದು ಆರೋಪ ಮಾಡಿದ್ದಾರೆ..

ಇದನ್ನೂ ಓದಿ; ಭೂಮಿ ಮೇಲೆ ಗಂಡಸರೇ ಇಲ್ಲದಂತಾಗ್ತಾರಾ..?; ಆಘಾತಕಾರಿ ಸಂಶೋಧನೆ!

ಸ್ನೇಮಹಯಿ ಕೃಷ್ಣ ಮನೆ ಮೇಲೆ ಪೊಲೀಸರು ರೇಡ್‌ ಮಾಡಿದರೆ ಮುಡಾ ಸೀಲ್‌ಗಳು, ದಾಖಲೆಗಳು ಸಿಗುತ್ತವೆ ಎಂದಿರುವ ಲಕ್ಷ್ಮಣ್‌, ಸ್ನೇಹಮಯಿ ಕೃಷ್ಣ ಕಡೆಯವರು ನನ್ನ ಬಳಿ ಬಂದು 100 ಕೋಟಿ ಕೊಟ್ಟರೆ ಆತ ಸುಮ್ಮನಾಗುತ್ತಾನೆ ಎಂದು ಹೇಳಿದ್ದರು.. ಆ ಡೀಲ್‌ಗೆ ಬಂದ ವ್ಯಕ್ತಿಯನ್ನು ಶೀಘ್ರದಲ್ಲೇ ಮಾಧ್ಯಮಗಳ ಮುಂದೆ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ..
ಇವತ್ತು ನನ್ನ ಹಾಗೂ ಸಿಎಂ ಪತ್ನಿ ಪಾರ್ವತಿ ಅವರ ವಿರುದ್ಧ ಕೇಸ್‌ ದಾಖಲಿಸಿದ್ದಾರೆ.. ಸಹಿ ನಕಲಿ ಎಂದು ಹೇಳೋದಕ್ಕೆ ಆತನೇನು ತಜ್ಞನಾ ಎಂದೂ ಲಕ್ಷ್ಮಣ್‌ ಪ್ರಶ್ನೆ ಮಾಡಿದ್ದಾರೆ..

ಇದನ್ನೂ ಓದಿ; ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹೆಸರಲ್ಲೇ ವಂಚನೆ!

Share Post