CrimeDistricts

ಆರು ಸ್ಥಳ ಸರ್ಚ್‌ ಮಾಡಿದ್ದ ಶಂಕಿತ ಉಗ್ರ ಶಾರೀಖ್‌; ಯಾವ್ಯಾವ ಸ್ಥಳ ಗೊತ್ತಾ..?

ಮಂಗಳೂರು; ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಮಾಡಿದ್ದ ಶಂಕಿತ ಉಗ್ರ ಶಾರೀಖ್‌ ಮಂಗಳೂರಿಗೆ ಬಂದಿಳಿದಾಗ ಆರು ಲೊಕೇಷನ್‌ಗಳನ್ನು ಸರ್ಚ್‌ ಮಾಡಿದ್ದಾನೆ ಎಂಬ ವಿಚಾರ ಬಯಲಾಗಿದೆ. ತನಿಖಾ ತಂಡ ಈಗಾಗಲೇ ಪ್ರಾಥಮಿಕ ವರದಿ ಸಿದ್ಧಪಡಿಸಿದ್ದು, ಅದರ ಪ್ರಕಾರತ ಮೂರು ದೇವಸ್ಥಾನ ಹಾಗೂ ಎರಡು ಸಾರ್ವಜನಿಕ ಸ್ಥಳಗಳನ್ನು ಶಂಕಿತ ಉಗ್ರ ಶಾರೀಖ್‌ ಸರ್ಚ್‌ ಮಾಡಿದ್ದ ಎಂದು ತಿಳಿದುಬಂದಿದೆ. ಇದರಲ್ಲಿ ಎರಡು ಶಿವ ದೇವಸ್ಥಾನ, ಒಂದು ದೇವಿ ದೇವಸ್ಥಾನ, ಎರಡು ಸಾರ್ವಜನಿಕ ಸ್ಥಳ, ಒಂದು ಕಾರ್ಯಕ್ರಮ ಆರೋಪಿಯ ಟಾರ್ಗೆಟ್‌ ಆಗಿತ್ತು ಎನ್ನಲಾಗಿದೆ.

ಪಡೀಲು ಬಳಿಯ ರೈಲು ನಿಲ್ದಾಣ ಮತ್ತು ಬಿಜೈನ ಸರ್ಕಾರಿ ಬಸ್‌ ನಿಲ್ದಾಣವನ್ನು ಶಾರೀಖ್‌ ಸರ್ಚ್‌ ಮಾಡಿದ್ದ. ಇನ್ನು ಮಣ್ಣಗುಡ್ಡದಲ್ಲಿರುವ ಆರ್‌ಎಸ್ಎಸ್ ಕಚೇರಿ ʼಸಂಘನಿಕೇತನʼ ವನ್ನು ಹುಡುಕಿದ್ದ. ಘಟನೆ ನಡೆದ ದಿನ ಸಂಘನಿಕೇತನದಲ್ಲಿ ಬೃಹತ್ ವಿದ್ಯಾರ್ಥಿ ಸಮಾವೇಶ ನಡೆಯುತ್ತಿತ್ತು. ಇದನ್ನು ಉಗ್ರ ಟಾರ್ಗೆಟ್‌ ಮಾಡಿದ್ದನೆ ಎಂಬುದರ ಕುಇತು ತನಿಖೆ ನಡೆಯುತ್ತಿದೆ. ಇದಲ್ಲದೆ ಶಿವನ ದೇವಾಲಯಗಳನ್ನು ಶಾರೀಖ್‌ ಟಾರ್ಗೆಟ್‌ ಮಾಡಿದ್ದ ಎನ್ನಲಾಗುತ್ತಿದೆ. ಅವನ ವಾಟ್ಸಾಪ್‌ ಡಿಪಿಯಲ್ಲೂ ಶಿವನ ಫೋಟೋ ಹಾಕಿಕೊಂಡಿದ್ದ.

Share Post