CrimeDistricts

ಹರ್ಷ ಮನೆ ಮುಂದೆ ಲಾಂಗು ಝಳಪಿಸಿದ ಯುವಕರು; ಶಿವಮೊಗ್ಗದಲ್ಲಿ ಮತ್ತೆ ಭೀತಿ

ಶಿವಮೊಗ್ಗ; ಕೆಲ ತಿಂಗಳ ಹಿಂದೆ ಹತ್ಯೆಯಾದ ಹಿಂದೂ ಪರ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಬೆದರಿಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿದೆ.

ಶಿವಮೊಗ್ಗ ನಗರದ ಸೀಗೇಹಟ್ಟಿಯ ಹರ್ಷ ನಿವಾಸದ ಬಳಿ ಆರು ಮಂದಿ ಗುಂಪು ಲಾಂಗು-ಮಚ್ಚುಗಳನ್ನು ಹಿಡಿದು ಓಡಾಡಿದೆ. ಸೀಗೆಹಟ್ಟಿ, ರವಿವರ್ಮ ಬೀದಿ ಹಾಗೂ ಕೆ.ಆರ್‌.ಪುರ ರಸ್ತೆಗಳಲ್ಲಿ ಎರಡು ಬೈಕ್‌ಗಳಲ್ಲಿ ಆರು ಮಂದಿ ಯುವಕರು ಮಚ್ಚು-ಲಾಂಗು ಹಿಡಿದುಕೊಂಡು ಓಡಾಡಿ ಸ್ಥಳೀಯರ ಭಯ ಉಂಟು ಮಾಡಿದ್ದಾರೆ. ಈ ವೇಳೆ ಆ ಯುವಕರು ಅನ್ಯ ಕೋಮಿನ ಪರ ಘೋಷಣೆಗಳನ್ನೂ ಕೂಗಿದ್ದಾರೆ ಎನ್ನಲಾಗಿದೆ.

ಜೊತೆಗೆ ಪುಂಡ ಯುವಕರು ಸೀಗೆಹಟ್ಟಿಯಲ್ಲಿ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಪ್ರಕಾಶ್‌ ಎಂಬಾತ ಗಾಯಗೊಂಡಿದ್ದಾರೆ. ಗಾಯಾಳುವನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆಯಷ್ಟೇ ಶಿವಮೊಗ್ಗದ ಆಜಾದ್ ನಗರದಲ್ಲಿ ಕಾರು ಜಖಂಗೊಂಡ ಪ್ರಕರಣ ಸಂಬಂಧ ಹರ್ಷ ಸಹೋದರಿ ಅಶ್ವಿನಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

Share Post