Districts

ಕಸದಲ್ಲಿ ಪತ್ತೆಯಾಯ್ತು ನಿವೃತ್ತ ಎಎಸ್‌ಐ ಮೃತದೇಹ; ಮಗನೇ ಕೊಲೆಗಾರ..!

ರಾಯಚೂರು: ಮಗನೇ ತನ್ನ ವೃದ್ಧ ತಂದೆಯನ್ನು ಕೊಲೆ ಮಾಡಿ ಕಸದ ರಾಶಿಯಲ್ಲಿ ಎಸೆದಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ರಾಯಚೂರು ನಗರದ ಗಂಜ್‌ ವೃತ್ತದ ಬಳಿಯ ಗೋಶಾಲೆಯ ಕಸದ ರಾಶಿ ನಡುವೆ ನಿವೃತ್ತ ಎಎಸ್‌ಐ ಬಸವರಾಜಪ್ಪ ಅವರ ಮೃತದೇಹ ಪತ್ತೆಯಾಗಿದೆ. ಆರೋಪಿ ಮಗ ಜಗದೀಶ್‌ನನ್ನು ಬಂಧಿಸಲಾಗಿದೆ.

   ಬಸವರಾಜಪ್ಪ ಅವರು ಹದಿನೈದು ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತಿಗೊಂಡಿದ್ದರು. ನಿವೃತ್ತಿ ಬಳಿಕ ಅವರು ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಮದಲ್ಲಿ ವಾಸವಿದ್ದರು. ಕೆಲ ದಿನಗಳ ಹಿಂದೆಯಷ್ಟೇ ರಾಯಚೂರಿಗೆ ಬಂದಿದ್ದ ಬಸವರಾಜಪ್ಪ ಜೊತೆ ಮಗ ಕಿರಿಕ್‌ ಮಾಡಿಕೊಂಡಿದ್ದಾನೆ. ಮದುವೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಮಗ ಜಗದೀಶ್‌, ಬಸವರಾಜಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದರಿಂದ ಅವರು ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಮೃತದೇಹವನ್ನು ಕಸದ ರಾಶಿಗೆ ಎಸೆದ ಮಗ ಜಗದೀಶ್‌ ಅಲ್ಲಿಂದ ಪರಾರಿಯಾಗಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.

Share Post