CrimeDistricts

ಶಿವಮೊಗ್ಗದಲ್ಲಿ ರೌಡಿ ಹಂದಿ ಹಣ್ಣಿ ಬರ್ಬರ ಹತ್ಯೆ

ಶಿವಮೊಗ್ಗ; ಇಲ್ಲಿನ ವಿನೋಬ ನಗರ ಚೌಕಿ ಬಳಿ ರೌಡಿ ಹಂದಿ ಹಣ್ಣಿ ಎಂಬಾತನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಚೌಕಿ ಬಳಿ ಇದ್ದ ಹಂದಿ ಹಣ್ಣಿ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿರುವ ದುಷ್ಕರ್ಮಿಗಳು ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್‌ ಆಗಿದ್ದಾರೆ.

ಆರೋಪಿಗಳಿಗಳು ಆರು ಜನರಿದ್ದರೆಂದು ಗೊತ್ತಾಗಿದ್ದು, ದುಷ್ಕರ್ಮಿಗಳು ಕಾರಿನಲ್ಲಿ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರೌಡಿ ಹಂದಿ ಹಣ್ಣ ರಾಜ್ಯದಲ್ಲೇ ಕುಖ್ಯಾತಿ ಹೊಂದಿದ್ದ ಲವ, ಕುಶರನ್ನು ಹತ್ಯೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆತ ಕುಖ್ಯಾತಿ ಪಡೆದಿದ್ದ. ಎರಡು ವರ್ಷದ ಹಿಂದೆ ಹಂದಿ ಹಣ್ಣಿ ಸಹೋದರ ಗಿರೀಶ್‌ನನ್ನು ಸಹಾ ಇದೇ ರೀತಿಯಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಗಿರೀಶ್‌ ಕೂಡಾ ರೌಡಿ ಚಟುವಟಿಕೆಗಳಲ್ಲಿ ಭಾಗಿದ್ದನೆಂದು ತಿಳಿದುಬಂದಿದೆ.

Share Post