CrimeDistricts

ಕಾರಿಗೆ ಲಾರಿ ಡಿಕ್ಕಿ; ನಿವೃತ್ತ ಅಬಕಾರಿ ಡಿವೈಎಸ್‌ಪಿ ಹಾಗೂ ಅವರ ಪತ್ನಿ ಸಾವು

ಚಿತ್ರದುರ್ಗ; ಲಾರಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆ ಭರಮಸಾಗರ ಗ್ರಾಮದ ಬಳಿ ನಡೆದಿದೆ. ನಿವೃತ್ತ ಅಬಕಾರಿ ಡಿವೈಎಸ್‌ಪಿ ಜಯರಾಮ್‌ ನಾಯ್ಕ್‌ ಹಾಗೂ ಅವರ ಪತ್ನಿ ಲತಾ ಸಾವನ್ನಪ್ಪಿದವರು. ಬೆಂಗಳೂರಿಗೆ ಬಂದಿದ್ದ ಅವರು ಕಾರಿನಲ್ಲಿ ವಾಪಸ್‌ ಹೋಗುತ್ತಿದಾಗ ಈ ದುರ್ಘಟನೆ ನಡೆದಿದೆ.

ಜಯರಾಮ್‌ ಅವರು ದಾವಣಗೆರೆ ಮೂಲದವರಾಗಿದ್ದಾರೆ. ಅವರು ಪತ್ನಿ ಜೊತೆ ಬೆಂಗಳೂರಿಗೆ ಆಗಮಿಸಿದ್ದರು. ಇವತ್ತು ವಾಪಸ್‌ ದಾವಣಗೆರೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾರು ಭರಮಸಾಗರ ಬಳಿ ಬಂದಾಗ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

 

Share Post