DistrictsLifestyle

ಬೈಕ್‌ಗೆ ಅಡ್ಡಬಂದಿದ್ದರಿಂದ ಸವಾರ ಸಾವು; ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದ ನಾಯಿ!

ದಾವಣಗೆರೆ; ಮನುಷ್ಯರಿಗಷ್ಟೇ ಅಲ್ಲ, ಪ್ರಾಣಿಗಳಿಗೂ ಬುದ್ಧಿ ಇರುತ್ತದೆ. ಅದರಲ್ಲೂ ನಾಯಿಗಳಿಗೆ ಮನುಷ್ಯರಷ್ಟೇ ಬುದ್ಧಿ ಇರುತ್ತದೆ ಅನ್ನೋದು ಹಲವಾರು ರೀತಿಯಲ್ಲಿ ಸಾಬೀತಾಗುತ್ತಾ ಬರುತ್ತಿದೆ. ಅದೇ ರೀತಿ ದಾವಣಗೆರೆಯಲ್ಲೊಂದು ನಾಯಿ ತನ್ನಿಂದಾಗಿ ಸಾವನ್ನಪ್ಪಿದ ಬೈಕ್‌ ಸವಾರನ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದೆ. ಈ ದೃಸ್ಯ ಮನಕ ಕಲಕುವಂತಿದೆ.

ನಾಯಿಯೊಂದು ಅಡ್ಡಬಂದಿದ್ದರಿಂದ ಬೈಕ್‌ ಸ್ಕಿಡ್‌ ಆಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕ್ಯಾಸಿನಕೆರೆ ಗ್ರಾಮದ ತಿಪ್ಪೇಶ್ (21)  ಸಾವನ್ನಪ್ಪಿದಾತ. ಕುರುಬರವಿಟ್ಲಾಪುರದ ಬಳಿ ಬೈಕ್‌ಗೆ ನಾಯಿ ಅಡ್ಡಬಂದಿದ್ದರಿಂದ ತಿಪ್ಪೇಶ್‌ ಸಾವನ್ನಪ್ಪಿದ್ದ. ಇದಾಗಿ ಮೂರು ದಿನಗಳಾಗಿತ್ತು. ಮನೆಯಲ್ಲಿ ಇನ್ನೋ ಶೋಕ ಮಡುಗಟ್ಟಿತ್ತು. ಹೀಗಿರುವಾಗಲೇ, ಬೈಕ್‌ಗೆ ಅಡ್ಡ ಬಂದಿದ್ದ ನಾಯಿ, ತಿಪ್ಪೇಶ್‌ ಮನೆಯನ್ನು ಹುಡಿಕೊಂಡು ಬಂದಿದೆ.

ತಿಪ್ಪೇಶ್‌ ಮನೆಯ ಕೊಠಡಿ ಹಾಗೂ ಅಡುಗೆ ಮನೆಯಲ್ಲಿ ನಾಯಿ ಸುತ್ತಾಡಿದೆ. ನಂತರ ತಿಪ್ಪೇಶ್‌ ತಾಯಿಯ ಬಳಿ ಬಂದಿರುವ ನಾಯಿ, ಅಳಬಾರದೆಂದು ಸಮಾಧಾನ ಮಾಡಿದೆ. ಈ ದೃಶ್ಯಗಳ ಮೊಬೈಲ್‌ನಲ್ಲಿ ಸೆರೆಯಾಗಿವೆ.

 

Share Post