Districts

ಉದ್ಯಮಿ ಹತ್ಯೆಗೆ ಯತ್ನ; ಎಂಟು ಆರೋಪಿಗಳ ಬಂಧನ

ಯಲ್ಲಾಪುರ: ಇಲ್ಲಿನ ಸಬಗೇರಿಯಲ್ಲಿ ವಾಸವಿರುವ ರಿಯಲ್‌ ಎಸ್ಟೇಟ್‌ ಉದ್ಯಮಿ ಸುರೇಶ್‌ ರೇವಣಕರ್‌ ಎಂಬುವವರ ಮನೆಗೆ ನುಗ್ಗಿ, ಉದ್ಯಮಿಯ ಹತ್ಯೆಗೆ ಯತ್ನಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶುಕ್ರವಾರ ರಾತ್ರಿ ಸುರೇಶ್‌ ಅವರ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ಸುರೇಶ್‌ ಅವರ ಮೇಲೆ ಹಲ್ಲೆ ನಡೆಸಿದ್ದರು. ಅಷ್ಟೇ ಅಲ್ಲದೆ, ಮೊಬೈಲ್‌ ಕಿತ್ತುಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ ಪರಾರಿಯಾಗಿದ್ದಾರೆ. ಆರೋಪಿಗಳ ಬೆನ್ನುಹತ್ತಿದ ಯಲ್ಲಾಪುರ ಠಾಣೆ ಪೊಲೀಸರು, ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ಹಳಿಯಾಳ ಕಸಬಾ ಗಲ್ಲಿಯ ವಿನೋದ ರಾಮಚಂದ್ರ ಕಾಮತ, ನಂದೊಳ್ಳಿಯ ಮಹಾಬಲೇಶ್ವರ ಗಣಪತಿ ಭಟ್ಟ, ನಾಯ್ಕನಗಲ್ಲಿಯ ಗೋವಿಂದ ಶಾಂತಾರಾಮ ಸುತಾರ, ಸುಶಾಂತ ಅಶೋಕ ಖಾನಾಪುರಿ, ನಾಮದೇವ ಶಿವಾಜಿ ಹಲಗೇಕರ್, ಶ್ರೀಧರ ಸುರೇಶ ಉಪ್ಪರಿ, ರಾಘವೇಂದ್ರ, ಮಂಜುನಾಥ ಗಂಗಾರಾಮ ಎಂಬುವವರನ್ನು ಬಂಧಿಸಲಾಗಿದೆ. ಬಂಧಿತರಿಂದ ಎರಡು ಬೈಕ್‌ಗಳು, ಒಂದು ಕಾರು ಹಾಗೂ ಒಂಭತ್ತು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Share Post