DistrictsPolitics

ಡಿ.ಕೆ.ಶಿವಕುಮಾರ್‌ ಕೋಟೆಗೆ ಆರ್‌.ಅಶೋಕ್‌ ಲಗ್ಗೆ; ನಾಮಪತ್ರ ಸಲ್ಲಿಕೆ

ರಾಮನಗರ; ಇಂದು ಡಿ.ಕೆ.ಶಿವಕುಮಾರ್‌ ಕೋಟೆಗೆ ಸಚಿವ ಆರ್‌.ಅಶೋಕ್‌ ಲಗ್ಗೆ ಇಟ್ಟಿದ್ದರು. ಕನಕಪುರ ಕ್ಷೇತ್ರಕ್ಕೆ ಆರ್‌.ಅಶೋಕ್‌ಗೆ ಬಿಜೆಪಿ ಟಿಕೆಟ್‌ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಆರ್‌.ಅಶೋಕ್‌ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಮೆರವಣಿಗೆ ಮೂಲಕ ಬಂದು ನಾಮಪತ್ರ ಸಲ್ಲಿಕೆ ಮಾಡಿದರು.

ಆರ್‌.ಅಶೋಕ್‌ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ನಾಯಕರು ಸಾತ್‌ ನೀಡಿದರು. ಇನ್ನು ಚನ್ನಪಟ್ಟಣದಲ್ಲೂ ಇವತ್ತ ಕೇಸರಿಮಯವಾಗಿತ್ತು. ಚನ್ನಪಟ್ಟಣ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಭರ್ಜರಿ ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದರು. ಅದಕ್ಕೂ ಮೊದಲು ಸಿ.ಪಿ.ಯೋಗೇಶ್ವರ್‌ ಅವರು ಹಲವು ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Share Post