CrimeDistricts

ಶಿವಮೊಗ್ಗ ಜಿಲ್ಲೆಯಲ್ಲಿ ನಿಷೇದಾಜ್ಞೆ ಮುಂದುವರಿಕೆ; ಸಹಜಸ್ಥಿತಿಯತ್ತ ಶಿವಮೊಗ್ಗ ನಗರ

ಶಿವಮೊಗ್ಗ; ಸಾವರ್ಕರ್‌ ಭಾವಚಿತ್ರ ತೆಗೆದಿದ್ದು ಹಾಗೂ ಅನಂತರ ನಡೆದ ಚಾಕು ಇರಿತ ಪ್ರಕರಣದಿಂದಾಗಿ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಎರಡು ದಿನಗಳ ನಂತರ ಶಿವಮೊಗ್ಗ ನಗರ ಸಹಜಸ್ಥಿತಿಗೆ ಬಂದಿದೆ. ಶಾಲಾ ಕಾಲೇಜುಗಳು ಇಂದಿನಿಂದ ಶುರುವಾಗಿವೆ. ಇನ್ನೊಂದೆಡೆ ಇಂದೂ ಕೂಡಾ ಕೂಡಾ ನಿಷೇದಾಜ್ಞೆ ಮುಂದುವರೆಸಲಾಗಿದೆ. ಇನ್ನು ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣದ ಹಿನ್ನೆಲೆಯಲ್ಲಿ ಅಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಅಲ್ಲೂ ಕೂಡಾ ನಿಷೇಧಾಜ್ಞೆ ಜಾರಿಯಲ್ಲಿದೆ.

ನಿನ್ನೆ ನಡೆದ ಘಟನೆಯಿಂದಾಗಿ ಭದ್ರವಾತಿಯಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಗಿದೆ. ಅಗತ್ಯ ವಸ್ತುಗಳ ಮಳಿಗೆಗಳು ಬಿಟ್ಟು ಉಳಿದೆಲ್ಲಾ ಅಂಗಡಿಗಳು ಬಂದ್‌ ಆಗಿವೆ. ಹೋಟೆಲ್‌ಗಳಲ್ಲಿ ಪಾರ್ಸೆಲ್‌ಗಷ್ಟೇ ಅವಕಾಶ ನೀಡಲಾಗಿದೆ. ಇನ್ನು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಭದ್ರಾವತಿಯ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪರೇಡ್‌ ನಡೆಸಿದ್ದಾರೆ.

Share Post