DistrictsPolitics

ಮೈಸೂರಿನಲ್ಲಿ ಪ್ರತಾಪ ಸಿಂಹ ವರ್ಸಸ್‌ ಸಿದ್ದರಾಮಯ್ಯ; ಸಂಸದರ ಕಚೇರಿ ಬಳಿ ಕಾಂಗ್ರೆಸ್‌ ಹೈಡ್ರಾಮಾ

ಮೈಸೂರು; ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಹಾಗೂ ಸಿಎಂ ಸಿದ್ದರಾಮಯ್ಯ ನಡುವಿನ ಜಟಾಪಟಿ ಜೋರಾಗಿದೆ. ಮೊನ್ನೆ ಸಿಎಂ ಸಿದ್ದರಾಮಯ್ಯ ಅವರು ಎನ್‌ಆರ್‌ ಕ್ಷೇತ್ರದಲ್ಲಿ ಮಾತನಾಡುತ್ತಾ ಸಂಸದ ಪ್ರತಾಪಸಿಂಹರನ್ನು ಈ ಬಾರಿ ಸೋಲಿಸಿ ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಟಾಂಗ್‌ ನೀಡಿದ್ದ ಪ್ರತಾಪ ಸಿಂಹ, ಮೈಸೂರಿಗೆ ಏನೇನು ಕೊಟ್ಟಿದ್ದೇನೆ ಎಂದು ಹೇಳಿದ್ದರು. ನೀವೇನು ಮಾಡಿದ್ದೀರಿ ಪಟ್ಟಿ ಕೊಡಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮುಖಂಡ ಲಕ್ಷ್ಮಣ್‌ ಅವರು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳ ದಾಖಲೆಗಳ ಜೊತೆ ಸಂಸದ ಪ್ರತಾಪ ಸಿಂಹ ಅವರ ಕಚೇರಿ ಬಳಿ ಬಂದಿದ್ದರು.

ಟೇಬಲ್‌ ಹಾಕಿಕೊಂಡು ಪ್ರತಾಪ ಸಿಂಹ ಅವರ ಕಛೇರಿ ಬಳಿ ಕುಳಿತಿರುವ ಲಕ್ಷ್ಮಣ್‌, ಚರ್ಚೆಗೆ ಬರುವಂತೆ ಸಂಸದರನ್ನು ಆಹ್ವಾನಿಸಿದ್ದಾರೆ. ಹುಣಸೂರು ಮುಖ್ಯರಸ್ತೆಯಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಬಂದೋಬಸ್ತ್​​ಗೆ ಇದ್ದ ಪೊಲೀಸರು ಎಂ. ಲಕ್ಷ್ಮಣ ಅವರನ್ನು ತಡೆದಿದ್ದಾರೆ. ಈ ವೇಳೆ ಕಚೇರಿ ಮುಂದೆ ಚರ್ಚಿಸಲು ಕುರ್ಚಿ, ಟೇಬಲ್ ತರಿಸಿ ಎಂ. ಲಕ್ಷ್ಮಣ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೈಡ್ರಾಮಾ ಸೃಷ್ಟಿಸಿದ್ದಾರೆ.

 

Share Post