DistrictsPolitics

ಶೆಲ್ಟರ್‌ ಮೇಲಿನ ಗುಂಬಜ್‌ ನಾನೇ ತೆರವು ಮಾಡ್ತೀನಿ; ಪ್ರತಾಪ ಸಿಂಹ ಎಚ್ಚರಿಕೆ

ಮೈಸೂರು; ಇನ್ನೆರಡು ದಿನದಲ್ಲಿ ಬಸ್‌ ಶೆಲ್ಟರ್‌ ಮೇಲಿನ ಗುಂಬಜ್‌ ತೆರವು ಮಾಡದೇ ಹೋದರೆ ನಾನೇ ಅದನ್ನು ತೆರವು ಮಾಡುತ್ತೇನೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ ಸಿಂಹ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನಲ್ಲಿ ಇಂದು ಮಾತನಾಡಿದ ಅವರು, ನಂಜನಗೂಡು ರಸ್ತೆಯಲ್ಲಿರುವ ಬಸ್‌ ಶೆಲ್ಟರ್‌ ಮೇಲೆ ಗುಂಬಜ್‌ ರೀತಿಯ ವಿನ್ಯಾಸ ಮಾಡಲಾಗಿದೆ. ಇದನ್ನು ತೆರವುಗೊಳಿಸುವಂತೆ ಗಡುವು ನೀಡಲಾಗಿತ್ತು. ಇನ್ನೆರಡು ದಿನ ಬಾಕಿ ಇದೆ. ಅಷ್ಟರೊಳಗೆ ತೆರವು ಮಾಡದೇ ಹೋದರೆ ನಾನೇ ತೆರವು ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 

ನಾನು ಹೇಳಿಕೆ ಕೊಡುವ ಮುಂಚೆ ಬರೀ ಗುಂಬಜ್ ಇತ್ತು ಎಂದಿರುವ ಪ್ರತಾಪ ಸಿಂಹ, ರಾತ್ರೋರಾತ್ರಿ ಅದರ ಮೇಲೆ ಕಳಸ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾರೆ.  ಕೆಲವರು ಅರಮನೆ ಮೇಲೆ ಕೂಡಾ ಗುಂಬಜ್‌ ರೀತಿಯ ವಿನ್ಯಾಸ ಇದೆ. ಅದನ್ನೂ ತೆರವುಗೊಳಿಸಿ ಎನ್ನುತ್ತಿದ್ದಾರೆ. ಆದ್ರೆ ಮಸೀದಿ ಮೇಲಿನ ಗುಂಬಜ್‌ಗೂ ಅರಮನೆ ಮೇಲಿನ ಗೋಪುರಕ್ಕೂ ವ್ಯತ್ಯಾಸ ಇಲ್ಲವೆ ಎಂದು ಪ್ರಶ್ನೆ ಮಾಡಿದ್ದಾರೆ.

ಅರಮನೆ ಮೇಲಿನ ಗೋಪುರ ಇಂಡೋ- ಸಾರ್ಸೆನಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ. ಆದ್ರೆ, ಬಸ್ ಸ್ಟ್ಯಾಂಡ್ ಮೇಲೆ  ಯಾವ ವಾಸ್ತುಶಿಲ್ಪ ನಿರ್ಮಿಸುತ್ತಾರೆ ಎಂದು ಪ್ರತಾಪ ಸಿಂಹ ಪ್ರಶ್ನೆ ಮಾಡಿದ್ದಾರೆ.

Share Post