Districts

ಕೌಟುಂಬಿಕ ಕಲಹ ಹಿನ್ನೆಲೆ; ಪತ್ನಿಯ ಕಾಲನ್ನೇ ಕತ್ತರಿಸಿದ ಪಾಪಿ ಪತಿ..!

ತುಮಕೂರು: ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಗಂಡ, ಹೆಂಡತಿಯನ್ನು ಮರಳು ಮಾಡಿ ಲಾಡ್ಜ್‌ಗೆ ಕರೆತಂದು ಆಕೆಯ ಕಾಲು ಕತ್ತರಿಸಿರುವ ಘಟನೆ ತುಮಕೂರು ನಗರದ ಅಶೋಕ ಹೋಟೆಲ್‌ನಲ್ಲಿ ನಡೆದಿದೆ. ಮಧುಗಿರಿ ಮೂಲದ ಅನಿತಾ ಎಂಬಾಕೆಯೇ ಗಂಡನಿಂದ ಕಾಲು ಕಳೆದುಕೊಂಡು ಮಹಿಳೆ. ನಾಲ್ಕು ವರ್ಷದ ಹಿಂದೆ ಅನಿತಾ ಅವರನ್ನು ಗದಗದ ಬಾಬು ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಆದ್ರೆ, ಇಬ್ಬರು ನಡುವೆ ಕಲಹ ಏರ್ಪಟ್ಟಿದ್ದರಿಂದ ವಿಚ್ಛೇದನಕ್ಕಾಗಿ ಅರ್ಜಿ ಕೂಡಾ ಸಲ್ಲಿಸಲಾಗಿತ್ತು. ಈ ನಡುವೆ ಪಾಪಿ ಗಂಡ, ಅನಿತಾಳ ಕಾಲು ಕತ್ತರಿಸಿದ್ದಾನೆ.

ಇಬ್ಬರೂ ಇಂದು ಬೆಳಗ್ಗೆ ತುಮಕೂರಿನ ಅಶೋಕ ಹೋಟೆಲ್‌ಗೆ ಬಂದು ಕೊಠಡಿ ಪಡೆದಿದ್ದರು. ಹೆಂಡತಿಯನ್ನು ಕೊಲೆ ಮಾಡುವ ಸಂಚಿನಿಂದಲೇ ಆರೋಪಿ ಬಾಬು ತಮ್ಮ ಹೆಂಡತಿಯನ್ನು ಹೋಟೆಲ್‌ಗೆ ಕರೆದುಕೊಂಡು ಬಂದಿದ್ದ. ಬ್ಯಾಗ್‌ನಲ್ಲಿ ಮುಚ್ಚು ಕೂಡಾ ತಂದಿದ್ದ. ಈ ಬಗ್ಗೆ ಅರಿವಿಲ್ಲದ ಅನಿತಾ ಖುಷಿಯಿಂದಲೇ ಬಾಬು ಜತೆ ಬಂದಿದ್ದರು. ಕೊಠಡಿಯೊಳಗೆ ಹೋಗುತ್ತಿದ್ದಂತೆ ಆರೋಪಿ ಬಾಬು, ತನ್ನ ಪತ್ನಿಯ ಕಾಲು ಕತ್ತರಿಸಿದ್ದಾನೆ. ನಂತರ ಆತನೇ ಅನಿತಾಳನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾನೆ.

Share Post