CrimeDistricts

ಮಾನಸಿಕ ಖಿನ್ನತೆಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಪೋಲೀಸ್‌

ಮೈಸೂರು: ಮೈಸೂರಿನ ಕೆ.ಎಸ್.ಆರ್.ಪಿ ಸಿಬ್ಬಂದಿಗಳ ವಸತಿ ಗೃಹದಲ್ಲಿ ಮನಸಿಕ ಖಿನ್ನತೆಯಿಂದ ಮಹಿಳಾ ಪೇದೆ ನೇಣಿಗೆ ಶರಣಾಗಿದ್ದಾರೆ. ನೇಣಿಗೆ ಶರಣಾದ ಗೀತಾ (32) ನಜರಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿನ್ನೆ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಗೀತಾ. ಸುಮಾರು 12 ಗಂಟೆ ವೇಳೆಗೆ ಅನಾರೋಗ್ಯದ ಕಾರಣ ನೀಡಿ ಮನೆಗೆ ವಾಪಸ್ ಆಗಿದ್ದರು.

ಮನೆಗೆ ಬಂದ ಗೀತ ಪತಿಯನ್ನು ಎಟಿಎಂನಿಂದ ಹಣ ತರುವಂತೆ ಹೇಳಿ ಕಳುಹಿಸಿದ್ದರು, ಈ ವೇಳೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಟಿಎಂನಿಂದ ಹಣ ತರಲು ತೆರಳಿದ್ದ ಪತಿ OTP ಗಾಗಿ ಗೀತಾರವರಿಗೆ ಕರೆ ಮಾಡಿದ್ದಾರೆ, ಗೀತಾ ಕೆರೆ ಸ್ವೀಕರಿಸದಿದ್ದಾದ ಮನೆಗೆ ವಾಪಸ್ ಆದಗ ಗೀತಾ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೋಂಡು ವಿಚಾರಣೆ ನಡೆಸುತಿದ್ದಾರೆ, ಮಾನಸಿಕ ಖಿನ್ನತೆಯಿಂದ ಗೀತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Share Post