DistrictsPolitics

ಬಿಜೆಪಿ ಕಚೇರಿಯಲ್ಲೇ ಗುಂಡು-ತುಂಡು ಪಾರ್ಟಿ; ಸೋತಿದ್ದಕ್ಕೆ ಪಾರ್ಟಿ ಮಾಡಿದರಂತೆ..!

ಹಾಸನ; ಸಕಲೇಶಪುರದ ಬಿಜೆಪಿ ತಾಲ್ಲೂಕು ಕಚೇರಿಯಲ್ಲಿ ಗುಂಡು-ತುಂಡು ಪಾರ್ಟಿ ನಡೆದಿದ್ದು, ಆ ಫೋಟೋ ಹಾಗೂ ವಿಡಿಯೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ. ಇತ್ತೀಗೆ ಸಕಲೇಶಪುರ ತಾಲ್ಲೂಕಿನ ಎರಡು ಗ್ರಾಪಂಗಳಿಗೆ ಚುನಾವಣೆ ನಡೆದಿತ್ತು. ಅದರಲ್ಲಿ ಬಿಜೆಪಿ ಸೋಲುಂಡಿತ್ತು. ಇದರ ನೋವಿಗೆ ಬಿಜೆಪಿ ಸ್ಥಳೀಯ ಮುಖಂಡರು ತಾಲ್ಲೂಕು ಬಿಜೆಪಿ ಕಚೇರಿಯಲ್ಲಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ.

ಉಚ್ಚಂಗಿ ಮತ್ತು ವಣಗೂರು ಗ್ರಾಮ ಪಂಚಾಯಿತಿಗಳಿಗೆ ಫೆಬ್ರವರಿ 25 ರಂದು ಚುನಾವಣೆ ನಡೆದಿದ್ದು, ಉಚ್ಚಂಗಿ ಗ್ರಾಪಂನ 10 ಸ್ಥಾನಗಳ ಪೈಕಿ ಜೆಡಿಎಸ್ ಬೆಂಬಲಿಗರು 8 ಮತ್ತು ಬಿಜೆಪಿ, ಕಾಂಗ್ರೆಸ್ ಬೆಂಬಲಿಗರು ತಲಾ ಒಂದು ಸ್ಥಾನ ಗೆದ್ದಿದ್ದರು. ವಣಗೂರು ಪಂಚಾಯಿತಿಯ 9 ಸ್ಥಾನಗಳ ಪೈಕಿ ಜೆಡಿಎಸ್ 6 ಹಾಗೂ ಬಿಜೆಪಿ ಬೆಂಬಲಿಗರು 3 ಸ್ಥಾನ ಗೆದ್ದಿದ್ದರು. ಇದ್ರಿಂದ ಬಿಜೆಪಿ ಮುಖಂಡರಿಗೆ ನೋವಾಗಿದ್ದು, ಫೆಬ್ರವರಿ 28ರಂದು ನೋವು ಮರೆಯಲು ಗುಂಡು ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಸಕಲೇಶಪುರ ತಾಲೂಕು ಮಂಡಲ ಅಧ್ಯಕ್ಷ ಮಂಜುನಾಥ ಸಾಂಗ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೇಶ್ ಸೇರಿ ಹಲವರು ಇದರಲ್ಲಿ ಭಾಗವಹಿಸಿದ್ದರು. ಕಚೇರಿಯಲ್ಲೇ ಗುಂಡು ಪಾರ್ಟಿ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

Share Post