CrimeDistricts

ಪ್ರವೀಣ್‌ ಹತ್ಯೆ ಆರೋಪಿಗಳ ವಿರುದ್ಧ ಆಕ್ರೋಶ; ಐದಾರು ಅಂಗಡಿ ಧ್ವಂಸ

ಸುಳ್ಯ (ದಕ್ಷಿಣ ಕನ್ನಡ); ಹಿಂದೂ ಸಂಘಟನೆ ಮುಖಂಡ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅದರಲ್ಲಿ ಶಫೀಕ್‌ ಎಂಬಾತನೂ ಸೇರಿದ್ದಾರೆ. ಆರೋಪಿಗಳ ಬಂಧನ ವಿಚಾರ ಗೊತ್ತಾಗುತ್ತಿದ್ದಂತೆ, ಪ್ರವೀಣ್‌ ಬೆಂಬಲಿಗರ ಆಕ್ರೋಶ ಭುಗಿಲೆದ್ದಿದೆ. ಬಂಧಿತ ಆರೋಪಿ ಶಫೀಕ್‌ ಕೆಲಸ ಮಾಡುತ್ತಿದ್ದ ಅಂಗಡಿ ಸೇರಿ ಸುಮಾರು ಐದಾರು ಅಂಗಡಿಗಳನ್ನು ಧ್ವಂಸ ಮಾಡಲಾಗಿದೆ.

 

ಇಂದು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.  ಜಾಕೀರ್‌ ಸವಣೂರು ಹಾಗೂ ಶಫೀಕ್‌ ಬಂಧಿತರು. ಶಫೀಕ್‌ ಸುಳ್ಯ ತಾಲ್ಲೂಕಿನ ಗುಟ್ಟಿಗಾರುವಿ ಗ್ರಾಮದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತ ಕೆಲಸ ಮಾಡುತ್ತಿದ್ದ ಅಂಗಡಿ ಹಾಗೂ ಅಕ್ಕ ಪಕ್ಕ ಇದ್ದ ಅಂಗಡಿಗಳನ್ನೂ ಧ್ವಂಸ ಮಾಡಲಾಗಿದೆ.

 

 

Share Post