DistrictsPolitics

ಚರಂಡಿ ಉದ್ಘಾಟನೆಗೂ ಮೋದಿ ಕರೆಸುತ್ತಾರೆ; ಪ್ರಿಯಾಂಕ್‌ ಖರ್ಗೆ ಲೇವಡಿ

ಯಾದಗಿರಿ; ರಾಜ್ಯ ಬಿಜೆಪಿ ನಾಯಕರು ಜನರ ನಂಬಿಕೆ ಉಳಿಸಿಕೊಂಡಿಲ್ಲ. ಹೀಗಾಗಿ ಮೋದಿ, ಅಮಿತ್‌ ಶಾ ಅವರನ್ನು ಕರೆಸುತ್ತಿದ್ದಾರೆ. ಚರಂಡಿ ಉದ್ಘಾಟನೆಗೂ ಪ್ರಧಾನಿ ಮೋದಿಯನ್ನು ಕರೆಸುತ್ತಾರೆ ಎಂದು ಶಾಸಕ ಪ್ರಿಯಾಂಕ್‌ ಕೃಷ್ಣ ಲೇವಡಿ ಮಾಡಿದ್ದಾರೆ.

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ನಡೆದ ಪ್ರಜಾ ಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರದ ಒಂದೇ ಒಂದು ಯೋಜನೆ ಬಡವರಿಗೆ ಸಹಾಯವಾಗಿದ್ದರೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.
ಗುತ್ತಿಗೆದಾರರ ಸಂಘದವ್ರೇ ಹೇಳುತ್ತಿದ್ದಾರೆ. ಸರ್ಕಾರ ನಲವತ್ತು ಪರ್ಸೆಂಟ್‌ ಕಮೀಷನ್‌ ಪಡೆಯುತ್ತಿದೆ ಅಂತ. ಹೈಕಮಾಂಡ್‌ಗೆ ಸಿಎಂ ಬ್ರೋಕರ್‌ ಎಂದು ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Share Post