Districts

ಶಾಸಕರು ಸಂಪರ್ಕದಲ್ಲಿದ್ದ ಮಾತ್ರಕ್ಕೆ ಪಕ್ಷ ಬಿಟ್ಟು ಹೋಗಲ್ಲ : ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ.  ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವ ಬಿಜೆಪಿ ಶಾಸಕ ಪಟ್ಟಿ ಕೊಡಲಿ ಆಮೇಲೆ ನೋಡೋಣ ಎಂದು ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ.  ಬಿಜೆಪಿ ಶಾಸಕರು ಕೈ ನಾಯಕರ ಸಂಪರ್ಕದಲ್ಲಿದ್ದ ಮಾತ್ರಕ್ಕೆ ಜೊತೆಯಲ್ಲಿ ಹೋಗ್ತಾರೆ ಎಂಬ ಸಂದೇಶ ಹೋಗಲ್ಲ. ಇಂತಹ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಅಂದರೆ ನಾವು ವ್ಯಾಖ್ಯಾನಿಸಬಹುದು. ಎದುರಲ್ಲಿ ಸಿಕ್ಕಾಗ ಮಾತಾಡ್ಬೇಕು, ರಾಜಕೀಯ ಬೇರೆ ವಿಶ್ವಾಸ ಬೇರೆ. ಚುನಾವಣೆಗೆ ಇನ್ನೂ ಹದಿನೈದು ತಿಂಗಳು ಇದೆ.  ಚಾಲ್ತಿಯಲ್ಲಿರಬೇಕು ಅಂತ ಏನೇನೋ ಮಾತಾಡ್ತಾರೆ ಎಂದು ವ್ಯಂಗ್ಯವಾಡಿದ್ರು.

ಉಸ್ತುವಾರಿ ಸಚಿವರ ಬದಲಾವಣೆ ಆಗಿದ್ದಕ್ಕೆ ಅಭಿಮಾನಿಗಳಿಗೆ ಕಾರ್ಯಕರ್ತರಿಗೆ ಸ್ವಲ್ಪ ಬೇಸರ ತಂದಿದೆ . ಚಿಕ್ಕಬಳ್ಳಾಪುರಕ್ಕೆ ಎಂಟಿಬಿ ನಾಗರಾಜ್ ಉಸ್ತುವಾರಿಯಾಗಿದ್ದಾರೆ. ಅವರ  ಸಹಕಾರದಿಂದ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೇನೆ . ಮೊದಲಿನಂತೆ ಎಲ್ಲಾ ಕ್ಷೇತ್ರಗಳಿಗೂ ಭೇಟಿ ಕೊಡುತ್ತೇನೆ. ಕೋಲಾರ ,ಚಿಕ್ಕಬಳ್ಳಾಪುರ ಬೆ.ಗ್ರಾಮಾಂತರ ಜಿಲ್ಲೆಗಳಲ್ಲಿ ಓಡಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕೆಲಸ ಮಾಡುತ್ತೇನೆ ಎಂದರು.

Share Post