Districts

ಕೊವಿಡ್‌ ಪರಿಹಾರ ಕೊಟ್ಟಿದ್ದೇವೆ; ನನಗೇ ಮತ ಹಾಕಬೇಕು ಎಂದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ಈಗಲೇ ಮತದಾರರಿಂದ ಆಣೆ ಪ್ರಮಾಣ ಮಾಡಿಸಿಕೊಳ್ಳಲು ಶುರು ಮಾಡಿದ್ದಾರೆ. ಕೊವಿಡ್‌ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಶಾಸಕ ರೇಣುಕಾರ್ಯ, ತಮ್ಮ ಕ್ಷೇತ್ರದ ಫಲಾನುಭವಿಗಳನ್ನು ತಮ್ಮ ಮನೆ ಬಳಿ ಕರೆಸಿಕೊಂಡು ಆಣೆ ಮಾಡಿಸಿಕೊಂಡಿದ್ದಾರೆ.

ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ನೀಡುತ್ತಿದೆ. ನಾನು ವೈಯಕ್ತಿಕವಾಗಿ ಹತ್ತು ಸಾವಿರ ರೂಪಾಯಿ ನೀಡುತ್ತಿದ್ದೇನೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲಾ ನನಗೇ ಮತ ನೀಡಬೇಕು. ಹಾಗಂತ ಪ್ರಮಾಣ ಮಾಡಿ ಎಂದು ರೇಣುಕಾಚಾರ್ಯ ಫಲಾನುಭವಿಗಳಿಂದ ಪ್ರಮಾಣ ಮಾಡಿಸಿಕೊಂಡಿದ್ದಾರೆ. ರೇಣುಕಾರ್ಯ ಪ್ರಮಾಣ ಮಾಡಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

 

Share Post