CrimeDistricts

ವ್ಯಾಪಾರಿ ಮನೆಯಲ್ಲಿ ಕಳ್ಳತನ; ಒಂದು ಕೆಜಿ ಚಿನ್ನ, ಹಣ ಕಳವು

ಮೈಸೂರು; ಟಿ. ನರಸೀಪುರ ಪಟ್ಟಣದ ವ್ಯಾಪಾರಿ ಮನೆಯಲ್ಲಿ ಸಿನಿಮೀಯ ಶೈಲಿಯಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.  ಕಳ್ಳರು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗಿದ್ದು, ಕಳ್ಳರನ್ನು ಹುಡುಕಲು ನಾಲ್ಕು ಪೊಲೀಸ್‌ ತಂಡಗಳನ್ನು ರಚನೆ ಮಾಡಲಾಗಿದೆ.

   ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕ, ಸೌತ್ ಇಂಡಿಯನ್ ಆಯಿಲ್ ಮಿಲ್ಸ್, ಪತಂಜಲಿ ಫುಡ್, ಅಕ್ಷಯ ಫುಡ್ ಸೇರಿದಂತೆ ಪ್ರಮುಖ ಏಜೆನ್ಸಿಗಳನ್ನು ನಡೆಸುತ್ತಿರುವ ಓ.ಜಿ.ಶ್ರೀನಿವಾಸ್ ಅವರ ಮನೆಯಲ್ಲಿ ಕಳೆದ ರಾತ್ರಿ ಕಳ್ಳತನ ನಡೆದಿದೆ. 30 ಲಕ್ಷ ರೂಪಾಯಿ ನಗದು ಸೇರಿ 1 ಕೋಟಿ 67 ಲಕ್ಷ ರೂಪಾಯಿ ಬೆಲೆಯ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ.

   ಗಿರವಿ ಅಂಗಡಿ ನಡೆಸುತ್ತಿರುವ ಮಹಾವೀರ್ ಜೈನ್ ಎಂಬುವರು ಗ್ರಾಹಕರಿಂದ ಅಡವಿಟ್ಟುಕೊಂಡ ಭಾರಿ ಪ್ರಮಾಣದ ಚಿನ್ನಾಭರಣಗಳನ್ನು ಶ್ರೀನಿವಾಸ್ ಅವರ ಮನೆಯ ಲಾಕರ್​​ನಲ್ಲಿ ಇರಿಸಿದ್ದರು. ಕಳ್ಳರು ಆ ಚಿನ್ನಾಭರಣಗಳನ್ನು ದೋಚಿದ್ದಾರೆ. ಶ್ರೀನಿವಾಸ್ ಅವರ ಪಕ್ಕದ ಮನೆಯಲ್ಲಿ ಮಹಾವೀರ್ ಜೈನ್ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ.

Share Post