Districts

ಲ್ಯಾಪ್‌ ಟಾಪ್‌ ವಿತರಿಸುವಂತೆ ಸಿಎಂ ಕಾರಿಗೆ ಮುತ್ತಿಗೆ

ಬೆಳಗಾವಿ: ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಣೆ ಮಾಡುವಂತೆ ಒತ್ತಾಯಿಸಿ ಆರ್‌ ಸಿಯು ವಿದ್ಯಾರ್ಥಿಗಳು ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಾಲೂಕಿನ ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದಲ್ಲಿ ಆರ್‌ ಸಿಯು ಕ್ಯಾಂಪಸ್‌ ನಿರ್ಮಾಣಕ್ಕೆ ಭೂಮಿ ಪೂಜೆ ನೆರೆವೇರಿಸಿ ತೆರಳುತ್ತಿದ್ದ ವೇಳೆ ಮುಖ್ಯಮಂತ್ರಿ ಕಾರಿಗೆ ವಿದ್ಯಾರ್ಥಿಗಳು ಮುತ್ತಿಗೆ ಹಾಕಿದ್ದಾರೆ.
ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ನಾಲ್ಕನೆ ಸೆಮಿಸ್ಟರ್‌ ನಲ್ಲಿದ್ರೂ ಕೂಡ ಲ್ಯಾಪ್‌ ಟಾಪ್‌ ನೀಡಿಲ್ಲ. ನಾವು ಸುಮಾರು ೩೧೬ ವಿದ್ಯಾರ್ಥಿಗಳಿದ್ದೇವೆ. ಕುಲಪತಿ, ಕುಲಸಚಿವರನ್ನು ಕೇಳಿದರೆ ಎಸ್‌ ಸಿಪಿ ಮತ್ತು ಟಿಎಸ್ ಪಿ ಅನುದಾನ ಬಂದಿಲ್ಲ ಎನ್ನುತ್ತಾರೆ. ಅವರಿಂದ ಸೂಕ್ತ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಸ್ನಾತಕೋತ್ತರ ಪದವಿ ಮುಗಿಯಲು ಆರು ತಿಂಗಳು ಬಾಕಿ ಇದೆ. ಆದರೂ ಈ ವರ್ಷವೂ ಲ್ಯಾಪ್‌ ಟಾಪ್‌ ವಿತರಣೆಯಾಗಿಲ್ಲ. ಪ್ರಾಜೆಕ್ಟ್‌ ಮಾಡಲು ಲ್ಯಾಪ್‌ ಟಾಪ್‌ ಅವಶ್ಯಕತೆ ಇದೆ. ಹೀಗಾಗಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಇನ್ನು ವಿದ್ಯಾರ್ಥಿಗಳಿಗೆ ಸ್ಪಂದಿಸಿದ ಸಿಎಂ, ಶೀಘ್ರವೇ ಲ್ಯಾಪ್‌ ಟಾಪ್‌ ಕೊಡುಸುತ್ತೇನೆ ಎಂದು ಭರವಸೆ ನೀಡಿದರು. ಡಿ.೨೩ ರಿಂದ ಕುಲಸಚಿವರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

 

Share Post