CrimeDistricts

ಅಡಿಕೆ ಗಿಡಗಳನ್ನು ನಾಶ ಮಾಡಿದ ದುಷ್ಕರ್ಮಿಗಳು; ಕಣ್ಣೀರು ಹಾಕಿದ ರೈತ

ಹಾವೇರಿ; ಮೂರು ವರ್ಷ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ನಾಶ ಮಾಡಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಕೂಸನೂರು ಗ್ರಾಮದಲ್ಲಿ ನಡೆದಿದೆ. ಇದ್ರಿಂದ ಮನನೊಂದ ರೈತ ಜಮೀನಿನಲ್ಲಿ ಹೊರಳಾಡಿ ಕಣ್ಣೀರು ಹಾಕಿದ ಘಟನೆ ನಡೆದಿದೆ.

ರಾತ್ರಿ ಅಡಿಕೆ ತೋಟಕ್ಕೆ ನುಗ್ಗಿರುವ ದುಷ್ಕರ್ಮಿಗಳು ಅಡಿವೆಪ್ಪ ಎಂಬುವವರಿಗೆ ಸೇರಿದ 52 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ. ತೊಂಡರಿಸಿದ್ದ ಅಡಿಕೆ ಗಿಡಗಳನ್ನು ತಬ್ಬಿಕೊಂಡು ರೈತ ಅಡಿವೆಪ್ಪ ಕಣ್ಣೀರು ಸುರಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರೈತ ಅಡಿವೆಪ್ಪ ಆಗ್ರಹ ಮಾಡಿದ್ದಾರೆ.

Share Post