Districts

ಎಂಇಎಸ್‌ ಪುಂಡರನ್ನು ಗಡಿಪಾರು ಮಾಡಿ

ಕೊಪ್ಪಳ: ನಾಡದ್ರೋಹಿ ಎಂಇಎಸ್‌ ಪುಂಡಾಟಿಕೆ ಮುಂದುರಿದಿದೆ. ಇದನ್ನು ಖಂಡಿಸಿ ಕೊಪ್ಪಳದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಮುಂದುವರಿದಿದೆ. ನಗರದ ಕೇಂದ್ರಿಯ ಬಸ್‌ ನಿಲ್ದಾಣದಲ್ಲಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಕರವೇ ಮುಖಂಡರು ಎಂಇಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಂಇಎಸ್‌ ಪುಂಡಾಟಿಕೆ ಹೆಚ್ಚಾಗಿದೆ. ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಎಂಇಎಸ್‌ ಅನ್ನು ನೀಷೇಧ ಮಾಡಿ. ತಪ್ಪಿಸ್ಥರುನ್ನು ಬಂಧಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕರವೇ ಮುಖಂಡರಾದ ಗಿರೀಶ್‌ ಆನಂದ್‌ ಹಾಗೂ ಹನುಮಂತ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಕೂಡಲೇ ಎಂಇಎಸ್‌ ಪುಂಡರನ್ನು ಗಡಿಪಾರು ಮಾಡಿ ಎಂದು ಒತ್ತಾಯಿಸಿದ್ದಾರೆ.

Share Post