CrimeDistricts

ತುಮಕೂರಿನ ಕಂಪನಿಯೊಂದರಲ್ಲಿ ಭಾರಿ ಬೆಂಕಿ; ಕೋಟ್ಯಂತರ ರೂಪಾಯಿ ನಷ್ಟ

ತುಮಕೂರು; ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಬೆಂಕಿ ದುರಂತ ಸಂಭವಿಸಿದೆ, ಇಲ್ಲಿನ ವೀರೇಶ್‌ ಇಂಡಸ್ಟ್ಟ್ರೀಸ್‌ ಫಾರ್ಮಾಸಿಟಿಕಲ್‌ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಇಡೀ ಕಟ್ಟಡ ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆ ಆಕಾಶ ಚಾಚಿದ್ದರಿಂದ ಅಕ್ಕಪ್ಪಕ್ಕದ ಫ್ಯಾಕ್ಟರಿಗಳಿಗೂ ಹರಡುವ ಭೀತಿ ಇತ್ತು. ಆದ್ರೆ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಬೇರೆಡೆ ಹರಡದಂತೆ ತಡೆದಿದ್ದಾರೆ.

ಫ್ಯಾಕ್ಟರಿಯಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಘಟನೆಗೆ ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ. ಘಟನೆಯಲ್ಲಿ ಯಾವುದೇ ಅದೃಷ್ಟವಶಾತ್‌ ಯಾವುದೇ ಸಾವುನೋವು ಸಂಭವಿಸಿಲ್ಲ.

 

Share Post