CinemaDistricts

ಪಾಂಡವಪುರದಲ್ಲಿ ಇಂದಿನಿಂದ ಪುನೀತೋತ್ಸವ

ಮಂಡ್ಯ; ಮೇಲುಕೋಟೆ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ಇಂದಿನಿಂದ ಪಾಂಡವಪುರದಲ್ಲಿ ಮೂರು ದಿನಗಳ ಪುನೀತೋತ್ಸವ ನಡೆಯಲಿದೆ. ಪಾಂಡವಪುರ ಕ್ರಿಡಾಂಗಣದಲ್ಲಿ ಅದ್ದೂರಿ ವೇದಿಕೆ ರೆಡಿ ಯಾಗಿದೆ.

ಇಂದು ಸಂಜೆ ನಟ ನಿಖಿಲ್ ಕುಮಾರಸ್ವಾಮಿ ಪುನೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರರಂದ ಹಲವು ನಟ ಮತ್ತು ನಟಿಯರು ಭಾಗವಹಿಸಲಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ, ಗಾಯಕ ವಿಜಯ ಪ್ರಕಾಶ್ ಹಾಗೂ ಗಾಯಕಿ ಅನನ್ಯ ಭಟ್ ನೇತೃತ್ವದಲ್ಲಿ ಸಂಗೀತ ಸಂಜೆ ನಡೆಯಲಿದೆ. ಹಾಸ್ಯ ನಟರು ಹಾಸ್ಯ ಸಂಜೆ ನಡೆಸಿಕೊಡಲಿದ್ದಾರೆ.

Share Post