CrimeDistricts

ಮಹಿಳೆಯರ ರುಂಡವಿಲ್ಲದ ದೇಹ ಪತ್ತೆ ಪ್ರಕರಣ; ಕೊನೆಗೂ ಬಯಲಾಯ್ತು ಮರ್ಡರ್‌ ಮಿಸ್ಟರಿ

ಮಂಡ್ಯ; ಎರಡು ತಿಂಗಳ ಹಿಂದೆ ಮಂಡದ ಬಳಿ ಎರಡು ರುಂಡವಿಲ್ಲದೆ ಮಹಿಳೆಯರ ದೇಹಗಳು ನಾಲೆಯಲ್ಲಿ ತೇಲಿಬಂದಿದ್ದರು. ಈ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ತಲೆನೋವು ಶುರುವಾಗಿತ್ತು. ಯಾವುದೇ ಕೋನದಲ್ಲಿ ತನಿಖೆ ಮಾಡಿದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಆದ್ರೆ, ಪೊಲೀಸರು ಮತ್ತೊಂದು ಕೊಲೆ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಆತನಿಂದ ರುಂಡವಿಲ್ಲದ ಮಹಿಳೆಯರ ಕೊಲೆ ಮಾಹಿತಿ ಬಯಲಾಗಿದೆ. 

ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಎಂಬಾತನೇ ಬಂಧಿತ ಆರೋಪಿ.. ಈತನಿಗೆ ಮದುವೆಯಾಗಿದೆ. ಆದ್ರೆ, ಪತ್ನಿಯ ಸಂಬಂಧಿಯೊಬ್ಬರ ಜೊತೆ ಈತನಿಗೆ ಲವ್‌ ಶುರುವಾಗಿತ್ತು. ಆಕೆಯ ಪ್ರೀತಿಯಲ್ಲಿ ಗಾಢ ಮುಳುಗಿಹೋಗಿದ್ದ. ಹೀಗಿರುವಾಗಲೇ, ಆಕೆಗೆ ವೇಶ್ಯಾವಾಟಿಕೆ ಲಿಂಕ್‌ ಇರುವುದು ಗೊತ್ತಾಗಿತ್ತು. ಇದ್ರಿಂದ ಭಾರಿ ನೊಂದಿದ್ದ ಆರೋಪಿ ಸಿದ್ದಲಿಂಗಪ್ಪ, ತನ್ನ ಪ್ರೇಯಸಿಗೆ ಪರಿಚಯವಿದ್ದ ಮಹಿಳೆಯರನ್ನು ಕೊಲೆ ಮಾಡಲು ಮುಂದಾಗಿದ್ದ. ಜೂನ್‌ 7ರಂದು ಇಬ್ಬರು ಮಹಿಳೆಯರನ್ನು ಕೊಲೆಗೈದ ಆತ, ರುಂಡಗಳನ್ನು ಬೇರ್ಪಡಿಸಿ, ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಗೆ ಮೃತದೇಹಗಳನ್ನು ಎಸೆದಿದ್ದ.

ಮಂಡ್ಯದ ನಾಲೆಯಲ್ಲಿ ಮಾತ್ರವಲ್ಲದೇ ಅದಕ್ಕೂ ಮೊದಲು ಬೆಂಗಳೂರಿನಲ್ಲೂ ಒಂದು ಕೊಲೆ ಮಾಡಿರೋದು ಗೊತ್ತಾಗಿದೆ. ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರಿಗೆ 1 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.

Share Post