CrimeDistricts

ಐಶಾರಾಮಿ ಕಾರುಗಳೇ ಟಾರ್ಗೆಟ್‌; ಮೈಸೂರಿನಲ್ಲಿ ಮಾಯವಾಗ್ತಿವೆ ಶ್ರೀಮಂತರ ವಾಹನಗಳು..!

ಮೈಸೂರು; ಮೈಸೂರು ನಗರದಲ್ಲಿ ಐಶಾರಾಮಿ ಕಾರುಗಳು ಕಳ್ಳತನವಾಗುತ್ತಿದೆ. ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು, ನಿವೃತ್ತಿ ಅಧಿಕಾರಿಗಳ ಕಾರುಗಳನ್ನೇ ಕಳ್ಳರು ಟಾರ್ಗೆಟ್‌ ಮಾಡಿದ್ದಾರೆ. ವಿಜಯನಗರ ಹಾಗೂ ನಿವೇದಿತಾ ನಗರ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಲ್ಲಿ ಮೂರು ಕಾರುಗಳ ಕಳುವಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರುಗಳನ್ನು ಕಳ್ಳತನ ಮಾಡಲಾಗಿದೆ.

ಎರಡು ಇನ್ನೋವಾ ಹಾಗೂ ಫಾರ್ಚ್ಯೂನರ್‌ ಕಾರುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ನಿರ್ಮಿತಿ ಕೇಂದ್ರದ ನಿವೃತ್ತ ನಿರ್ದೇಶಕ ಮಂಜುನಾಥ್ ಅವರ ಇನ್ನೋವಾ ಕ್ರಿಸ್ಟಾ‌, ಉದ್ಯಮಿ ಸಂತೋಷ ಅವರ ಫಾರ್ಚುನರ್, ಮಾಜಿ ಸಚಿವ ಕೋಟೆ ಶಿವಣ್ಣ ಅವರ ಇನ್ನೊವಾ ಕ್ರಿಸ್ಟಾ ಕಾರುಗಳನ್ನು ಕಳವು ಮಾಡಲಾಗಿದೆ. ಕಳ್ಳತನ ಮಾಡುವ ದೃಶ್ಯಗಳು ಸಿಸಿಟಿವಿಗಳಲ್ಲಿ ಸೆರೆಯಾಗಿವೆ. ಆದ್ರೂ ಇನ್ನೂ ಕೂಡಾ ಕಳ್ಳರು ಪತ್ತೆಯಾಗಿಲ್ಲ. ಇದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಮನೆ ಮುಂದೆ ಕಾರು ನಿಲ್ಲಿಸೋದಕ್ಕೆ ಜನ ಭಯಬೀಳುತ್ತಿದ್ದಾರೆ.

Share Post