CrimeDistricts

ಕಾರಿನಲ್ಲೇ ಹಾರ ಬದಲಾಯಿಸಿಕೊಂಡ ಪ್ರೇಮಿಗಳು; ರಾತ್ರೋರಾತ್ರಿ ದೊಡ್ಡ ಹೈಡ್ರಾಮಾ!

ಬಳ್ಳಾರಿ; ಯುವತಿಯ ಪೋಷಕರ ವಿರೋಧದ ನಡುವೆ ಪ್ರೇಮಿಗಳಿಬ್ಬರು ಕಾರಿನಲ್ಲೇ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ. ಅನಂತರ ಬಳ್ಳಾರಿಯ ಶಕ್ತಿಧಾಮದ ಬಳಿ ಹೈಡ್ರಾಮಾವೇ ನಡೆದುಹೋಗಿದೆ. ರಾತ್ರಿಯಿಡೀ ಈ ವಿಚಾರವಾಗಿ ಎರಡೂ ಕಡೆಯವರಿಂದ ದೊಡ್ಡ ರಂಪಾಟ ನಡೆದಿದೆ.

ಕೊಪ್ಪಳ ಮೂಲದ ಯುವತಿ ಅಮೃತಾ ಹಾಗೂ ಬಳ್ಳಾರಿ ಬಳಿಯ ತೆಕ್ಕಲಕೋಟೆಯ ಯುವಕ ಶಿವಪ್ರಸಾದ್‌  ಇಬ್ಬರೂ ಪ್ರೀತಿ ಮಾಡುತ್ತಿದ್ದರು. ಆದ್ರೆ ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಹೀಗಾಗಿ, ಇಬ್ಬರೂ ಮನೆಯಿಂದ ಓಡಿಹೋಗಲು ಯತ್ನಿಸಿದ್ದಾರೆ. ಕಾರಿನಲ್ಲೇ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದಾರೆ. ಅನಂತರ ಬಳ್ಳಾರಿಯ ಶಕ್ತಿಧಾಮ ಸಾಂತ್ವನ ಕೇಂದ್ರದಲ್ಲಿ ಇಬ್ಬರು ಆಶ್ರಯ ಪಡೆದಿದ್ದರು. ಇದನ್ನು ತಿಳಿದು ಇಲ್ಲಿಗೆ ಬಂದ ಎರಡೂ ಕಡೆಯವರು ರಂಪಾಟ ಮಾಡಿದ್ದಾರೆ.

ಇದೇ ವೇಳೆ ಯುವತಿಯ ಕಡೆಯವರು ಬಲವಂತದಿಂದ ಯುವತಿಯನ್ನು ಕರೆದೊಯ್ಯಲು ಪ್ರಯತ್ನ ಮಾಡಿದ್ದಾರೆ. ಆದ್ರೆ ಅದಕ್ಕೆ ಯುವತಿ ಒಪ್ಪಿಲ್ಲ. ಇನ್ನು ಇದೇ ವೇಳೆ ಯುವತಿ ಒಮ್ಮೆ ನನಗೆ ಪ್ರಿಯಕರ ಬೇಕು ಎಂದಿದ್ದಾಳೆ. ಮತ್ತೊಮ್ಮೆ ಪೋಷಕರು ಬೇಕು ಎಂದಿದ್ದಾಳೆ. ಇದರಿಂದಾಗಿ ಅಧಿಕಾರಿಗಳು ಹಾಗೂ ಪೋಷಕರು ಕನ್ಫ್ಯೂಸ್‌ ಆಗಿದ್ದಾರೆ.

ಇನ್ನು ಯುವಕ ರಕ್ಷಣೆಗಾಗಿ ಆಗ್ರಹ ಮಾಡಿದ್ದಾನೆ. ಕೊನೆಗೆ ಪೋಷಕರು ಯುವತಿಯನ್ನು ಶಕ್ತಿಧಾಮ ಸಾಂತ್ವನ ಕೇಂದ್ರದಲ್ಲಿ ಬಿಟ್ಟು ಹೋಗಿದ್ದಾರೆ.

 

Share Post