BengaluruDistrictsPolitics

ಮಹದಾಯಿ ವಿಚಾರವಾಗಿ ಮೋದಿ ಸ್ಪಷ್ಟನೆ ನೀಡಲಿ; ಡಿ.ಕೆ.ಶಿವಕುಮಾರ್

ಬೆಂಗಳೂರು; ಮಹದಾಯಿ ಯೋಜನೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ನಿಲುವು ಪ್ರಕಟಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಗ್ರಹಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮೋದಿಯವರು ಹುಬ್ಬಳ್ಳಿಗೆ ಬಂದಿದ್ದು, ಅಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ ಉತ್ತರ ಕರ್ನಾಟಕದ ಜನರ ಆತಂಕ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.
  ಮಹದಾಯಿ ಯೋಜನೆಯ DPRಗೆ ತಡೆ ನೀಡುವಂತೆ ಗೋವಾ CM ಮನವಿ ನೀಡಿದ್ದಾರೆ. ಇದಕ್ಕೆ ಕೇಂದ್ರ ಗೃಹ ಸಚಿವರು ಧನಾತ್ಮಕವಾಗಿ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ. ಕರ್ನಾಟಕಕ್ಕೆ ಏಕೆ ಈ ರೀತಿ ಭರವಸೆಗಳನ್ನು ನೀಡುತ್ತಿಲ್ಲ? ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನೆ ಮಾಡಿಲ್ಲ.
Share Post