CrimeDistricts

ಹಂಪಿ ವಿಜಯ ವಿಠಲ ದೇಗುಲದ ಬಳಿ ಚಿರತೆ ದಾಳಿ; ಕುದುರೆ ಸಾವು

ಹೊಸಪೇಟೆ; ವಿಜಯನಗರ ಜಿಲ್ಲೆ ಹಂಪಿಯಲ್ಲಿ ಚಿರತೆಗಳು ಆಗಾಗ ಕಾಣಿಸಿಕೊಳ್ಳುವುದನ್ನು ನೋಡಿದ್ದೇವೆ. ಇದೀಗ ಚಿರತೆಯೊಂದು ಕುದುರೆಯೊಂದನ್ನು ಬಲಿ ತೆಗೆದುಕೊಂಡಿದೆ. ಹಂಪಿ ವಿಜಯ ವಿಠಲ ಬಜಾರ್ ಬಳಿ ಚಿರತೆ ದಾಳಿಗೊಳಗಾಗಿ ಕುದುರೆ ಸಾವನ್ನಪ್ಪಿರುವುದು ಕಂಡುಬಂದಿದೆ.

ಎಂದಿನಂತೆ ಕುದುರೆಯನ್ನು ಅಲ್ಲಿ ಮೇಯಲು ಬಿಡಲಾಗಿತ್ತು. ಈ ವೇಳೆ ಚಿರತೆಯೊಂದು ಏಕಾಏಕಿ ಕುದುರೆ ಕತ್ತಿನ ಭಾಗದ ಮೇಲೆ ದಾಳಿ ಮಾಡಿದೆ. ಇದರಿಂದಾಗಿ ಕುದುರೆ ಸ್ಥಳದಲ್ಲೇ ಸಾವನ್ನಪ್ಪಿದೆ. ವಿಜಯ ವಿಠಲ ದೇವಸ್ಥಾನ ಸಂರಕ್ಷಿತ ಸ್ಮಾರಕವಾಗಿದ್ದು, ಈ ಸ್ಮಾರಕ ಕಣ್ತುಂಬಿಕೊಳ್ಳಲು ನಿತ್ಯ ನೂರಾರು ಜನ ಪ್ರವಾಸಿಗರು ಭೇಟಿ ಕೊಡುತ್ತಾರೆ. ಚಿರತೆ ದಾಳಿ ಆತಂಕಕ್ಕೆ ಕಾರಣವಾಗಿದೆ.

Share Post